ಕಾರ್ಮಿಕರು, ನಿರ್ಗತಿಕರಿಗೆ 2005ರಲ್ಲಿ ಅಂದಿನ ಶಾಸಕ ಎಚ್.ಆರ್. ಗವಿಯಪ್ಪನವರು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ನಿವೇಶನಗಳನ್ನು ಮಂಜೂರು ಮಾಡಿಸಿದ್ದರು. 2012ರಲ್ಲಿ ಅಂದಿನ ಶಾಸಕ ಆನಂದ್ ಸಿಂಗ್ ಅವರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದರು. ಬಳಿಕ ನಗರಸಭೆಯು ನಿವೇಶನಗಳನ್ನು ಅಳತೆ ಮಾಡಿ, ಕಲ್ಲಿನ ಮೇಲೆ ನಿವೇಶನಗಳ ಸಂಖ್ಯೆ ಬರೆಸಿ, ಒಳಚರಂಡಿ ನಿರ್ಮಿಸಿತು. ಆದರೆ, ಈಗ ಕೆಲವರು ಆ ಬಂಡೆಗಳನ್ನು ಕಿತ್ತು ಹಾಕಿ, ಅಕ್ರಮವಾಗಿ ಅಲ್ಲಿ ವಾಸವಾಗಿದ್ದಾರೆ ಎಂದು ಮನವಿಯಲ್ಲಿ ದೂರಿದರು.