ಒಬ್ಬೊಬ್ಬರಾಗಿಯೇ ಜನ ಹೋಗುತ್ತಿರುವುದನ್ನು ಗಮನಿಸಿದ, ಕಾರ್ಯಕ್ರಮದ ಸಂಘಟಕ ಶಾಸಕ ಆನಂದ್ ಸಿಂಗ್, ‘ದಯವಿಟ್ಟು ಯಾರೂ ಹೋಗಬೇಡಿ. ತಂಗಿ ಕುಳಿತುಕೊಳ್ಳಿ. ಈಗಷ್ಟೇ ಕಾರ್ಯಕ್ರಮ ಆರಂಭವಾಗಿದೆ’ ಎಂದು ಮನವಿ ಮಾಡಿದರು. ಆದರೆ, ಜನ ಅದನ್ನು ಲೆಕ್ಕಿಸದೆ ಅಲ್ಲಿಂದ ನಿರ್ಗಮಿಸಿದರು. ಈ ವೇಳೆ ಆನಂದ್ ಸಿಂಗ್ ವೇದಿಕೆಯಿಂದ ಕೆಳಗಿಳಿದು, ಜನರ ಬಳಿ ಹೋಗಿ, ‘ಶೀಘ್ರದಲ್ಲೇ ಕಾರ್ಯಕ್ರಮ ಮುಗಿಯುತ್ತದೆ. ಅಲ್ಲಿಯವರೆಗೆ ಸಹಕಾರ ನೀಡಬೇಕು’ ಎಂದು ಕೋರಿದರು.