<p><strong>ಬಳ್ಳಾರಿ: </strong>ಅವರೆಲ್ಲ ಶ್ರಮಿಕ ರೈಲು ಟಿಕೆಟ್ ಸಿಗದೇ ಹತಾಶರಾಗಿದ್ದವರು. ತಮ್ಮ ತವರಿಗೆ ವಾಪಸಾಗುವುದು ಹೇಗೆ ಎಂದು ಅರಿಯದೇ ಸಂಕಟದಲ್ಲಿದ್ದವರು.</p>.<p>ಅತಂತ್ರರಾಗಿ ಜಿಲ್ಲೆಯಲ್ಲೇ ಉಳಿದಿದ್ದ ಮಧ್ಯಪ್ರದೇಶದ ಸಿಧಿ ಜಿಲ್ಲೆಯ 59 ಕಾರ್ಮಿಕರು ಜಿಲ್ಲಾಡಳಿತ ಹಾಗೂ ದುಬೈನಲ್ಲಿರುವ ದಾನಿ ಸಂಸ್ಥೆ ಧರ್ಹಣ್ ಇಂಡಿಯನ್ ಗ್ರೂಪ್ಅವರ ನೆರವಿಗೆ ಬಂದ ಪರಿಣಾಮವಾಗಿ ಎರಡು ಬಸ್ಗಳಲ್ಲಿ ಬುಧವಾರ ತಮ್ಮ ತವರಿನತ್ತ ಪ್ರಯಾಣವನ್ನು ಆರಂಭಿಸಿದರು.</p>.<p>ಕಂಪ್ಲಿಯಲ್ಲಿ ಕಾಲುವೆ ದುರಸ್ತಿ ಕೆಲಸ ಮಾಡುತ್ತಿದ್ದ ಅವರಿಗೆ ರೈಲು ಟಿಕೆಟ್ ದೊರಕಿರಲಿಲ್ಲ. ಹೀಗಾಗಿ ಅವರು ಐದು ದಿನಗಳ ಹಿಂದೆ ಬಳ್ಳಾರಿಗೆ ಬಂದು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದ್ದರು.</p>.<p>ಪ್ರಯಾಣದ ವ್ಯವಸ್ಥೆ ಆಗುವವರೆಗೂ ಅವರನ್ನು ಹೊಸಪೇಟೆ ರಸ್ತೆಯ ಕ್ಲಾಸಿಕ್ ಫಂಕ್ಷನ್ ಹಾಲ್ನಲ್ಲಿರಿಸಲಾಗಿತ್ತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಊಟೋಪಚಾರದ ವ್ಯವಸ್ಥೆ ಮಾಡಿದ್ದರಿಂದ ಅವರು ಸಮಾಧಾನಪಟ್ಟುಕೊಂಡಿದ್ದರು. ಈ ಬುಧವಾರ ಅವರಿಗೆ ವಿಶೇಷವಾಗಿತ್ತು.</p>.<p>‘ಕಾರ್ಮಿಕರ ಪ್ರಯಾಣ ವೆಚ್ಚದಲ್ಲಿ ₨ 1.80 ಲಕ್ಷವನ್ನು ದಾನಿ ಸಂಸ್ಥೆಯು ಭರಿಸಿತು. ಕಾರ್ಮಿಕರು ತಲಾ ₨ 3 ಸಾವಿರ ಭರಿಸಿದರು. ನಂತರ ಎರಡು ಬಸ್ಗಳನ್ನು ನಿಗದಿ ಮಾಡಿ ಅವರನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಿದೆವು’ ಎಂದು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಅರ್ಧ ತಿಂಗಳ ಸಂಬಳ: </strong>‘ಕಾರ್ಮಿಕರು ಇಲ್ಲೇ ಇದ್ದು ಕೆಲಸ ಮುಂದುವರಿಸಿದರೆ ಪೂರ್ತಿ ಸಂಬಳ ನೀಡುವುದಾಗಿ ಗುತ್ತಿಗೆದಾರರು ಹೇಳಿದ್ದರು. ಆದರೆ ಕಾರ್ಮಿಕರು ತಮ್ಮೂರಿಗೆ ಹೊರಟು ನಿಂತಿದ್ದರಿಂದ ತಕ್ಷಣಕ್ಕೆ ಅರ್ಧ ತಿಂಗಳ ಸಂಬಳವಾಗಿ ತಲಾ ₨ 9 ಸಾವಿರ ಪಾವತಿಸಿದ್ದಾರೆ. ಕಾರ್ಮಿಕ ಇಲಾಖೆಗೂ ಈ ಮಾಹಿತಿ ನೀಡಲಾಗಿದೆ’ ಎಂದರು.</p>.<p><strong>1334 ಕಿಮೀ ಪ್ರಯಾಣ:</strong> ‘ಕಾರ್ಮಿಕರ ಜಿಲ್ಲೆಗೆ ಬಳ್ಳಾರಿಯಿಂದ ಅಂದಾಜು 1,334 ಕಿ ಮೀ ಅಂತರವಿದ್ದು ಕನಿಷ್ಠ 30 ಗಂಟೆ ಕಾಲ ಪ್ರಯಾಣಿಸಬೇಕು’ ಎಂದು ಮಾಹಿತಿ ನೀಡಿದರು.</p>.<p>ಕಾರ್ಮಿಕರ ತಂಡದ ನೇತೃತ್ವ ವಹಿಸಿದ್ದ ವಿಕ್ರಂಸಿಂಗ್ ಬೈಸ್, ‘ನಾವು ಇಲ್ಲೇ ಇದ್ದರೆ ಜೀವನ ನಡೆಸುವುದು ಕಷ್ಟಕರವಾಗುತ್ತದೆ ಎಂಬ ಕಾರಣಕ್ಕೆ ಊರಿಗೆ ಹೋಗುತ್ತಿದ್ದೇವೆ. ರೈಲಿನಲ್ಲಿ ಹೋಗಲು ಆಗದೇ ಹತಾಶರಾಗಿದ್ದ ನಮ್ಮನ್ನು ಬಸ್ನಲ್ಲಿ ಕಳಿಸಿಕೊಡುತ್ತಿರುವುದು ಸಂತೋಷ ತಂದಿದೆ’ ಎಂದರು.</p>.<p><strong>‘ಥ್ಯಾಂಕ್ಸ್ ಟು ಧರ್ಹಣ್ ಗ್ರೂಪ್’:</strong>ಬಸ್ ಹತ್ತುವ ಮುನ್ನ ಕಾರ್ಮಿಕರೆಲ್ಲರೂ ‘ಥ್ಯಾಂಕ್ಸ್ ಟು ಧರಣ್ ಇಂಡಿಯನ್ ಗ್ರೂಪ್’ ಎಂಬ ಫಲಕಗಳನ್ನು ಪ್ರದರ್ಶಿಸಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.</p>.<p>‘ಸಂಸ್ಥೆಯು ಆರ್ಥಿಕ ನೆರವನ್ನು ನೀಡಿದ್ದಕ್ಕೆ, ಜಿಲ್ಲಾಡಳಿತ ಶೀಘ್ರಗತಿಯಲ್ಲಿ ಸ್ಪಂದಿಸಿದ್ದಕ್ಕೆ ಕಾರ್ಮಿಕರನ್ನು ಇಷ್ಟು ಬೇಗ ಅವರ ಊರಿಗೆ ಕಳಿಸಲು ಸಾಧ್ಯವಾಗುತ್ತಿದೆ’ ಎಂದು ಎಂ.ಎ.ಷಕೀಬ್ ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಅವರೆಲ್ಲ ಶ್ರಮಿಕ ರೈಲು ಟಿಕೆಟ್ ಸಿಗದೇ ಹತಾಶರಾಗಿದ್ದವರು. ತಮ್ಮ ತವರಿಗೆ ವಾಪಸಾಗುವುದು ಹೇಗೆ ಎಂದು ಅರಿಯದೇ ಸಂಕಟದಲ್ಲಿದ್ದವರು.</p>.<p>ಅತಂತ್ರರಾಗಿ ಜಿಲ್ಲೆಯಲ್ಲೇ ಉಳಿದಿದ್ದ ಮಧ್ಯಪ್ರದೇಶದ ಸಿಧಿ ಜಿಲ್ಲೆಯ 59 ಕಾರ್ಮಿಕರು ಜಿಲ್ಲಾಡಳಿತ ಹಾಗೂ ದುಬೈನಲ್ಲಿರುವ ದಾನಿ ಸಂಸ್ಥೆ ಧರ್ಹಣ್ ಇಂಡಿಯನ್ ಗ್ರೂಪ್ಅವರ ನೆರವಿಗೆ ಬಂದ ಪರಿಣಾಮವಾಗಿ ಎರಡು ಬಸ್ಗಳಲ್ಲಿ ಬುಧವಾರ ತಮ್ಮ ತವರಿನತ್ತ ಪ್ರಯಾಣವನ್ನು ಆರಂಭಿಸಿದರು.</p>.<p>ಕಂಪ್ಲಿಯಲ್ಲಿ ಕಾಲುವೆ ದುರಸ್ತಿ ಕೆಲಸ ಮಾಡುತ್ತಿದ್ದ ಅವರಿಗೆ ರೈಲು ಟಿಕೆಟ್ ದೊರಕಿರಲಿಲ್ಲ. ಹೀಗಾಗಿ ಅವರು ಐದು ದಿನಗಳ ಹಿಂದೆ ಬಳ್ಳಾರಿಗೆ ಬಂದು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದ್ದರು.</p>.<p>ಪ್ರಯಾಣದ ವ್ಯವಸ್ಥೆ ಆಗುವವರೆಗೂ ಅವರನ್ನು ಹೊಸಪೇಟೆ ರಸ್ತೆಯ ಕ್ಲಾಸಿಕ್ ಫಂಕ್ಷನ್ ಹಾಲ್ನಲ್ಲಿರಿಸಲಾಗಿತ್ತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಊಟೋಪಚಾರದ ವ್ಯವಸ್ಥೆ ಮಾಡಿದ್ದರಿಂದ ಅವರು ಸಮಾಧಾನಪಟ್ಟುಕೊಂಡಿದ್ದರು. ಈ ಬುಧವಾರ ಅವರಿಗೆ ವಿಶೇಷವಾಗಿತ್ತು.</p>.<p>‘ಕಾರ್ಮಿಕರ ಪ್ರಯಾಣ ವೆಚ್ಚದಲ್ಲಿ ₨ 1.80 ಲಕ್ಷವನ್ನು ದಾನಿ ಸಂಸ್ಥೆಯು ಭರಿಸಿತು. ಕಾರ್ಮಿಕರು ತಲಾ ₨ 3 ಸಾವಿರ ಭರಿಸಿದರು. ನಂತರ ಎರಡು ಬಸ್ಗಳನ್ನು ನಿಗದಿ ಮಾಡಿ ಅವರನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಿದೆವು’ ಎಂದು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಅರ್ಧ ತಿಂಗಳ ಸಂಬಳ: </strong>‘ಕಾರ್ಮಿಕರು ಇಲ್ಲೇ ಇದ್ದು ಕೆಲಸ ಮುಂದುವರಿಸಿದರೆ ಪೂರ್ತಿ ಸಂಬಳ ನೀಡುವುದಾಗಿ ಗುತ್ತಿಗೆದಾರರು ಹೇಳಿದ್ದರು. ಆದರೆ ಕಾರ್ಮಿಕರು ತಮ್ಮೂರಿಗೆ ಹೊರಟು ನಿಂತಿದ್ದರಿಂದ ತಕ್ಷಣಕ್ಕೆ ಅರ್ಧ ತಿಂಗಳ ಸಂಬಳವಾಗಿ ತಲಾ ₨ 9 ಸಾವಿರ ಪಾವತಿಸಿದ್ದಾರೆ. ಕಾರ್ಮಿಕ ಇಲಾಖೆಗೂ ಈ ಮಾಹಿತಿ ನೀಡಲಾಗಿದೆ’ ಎಂದರು.</p>.<p><strong>1334 ಕಿಮೀ ಪ್ರಯಾಣ:</strong> ‘ಕಾರ್ಮಿಕರ ಜಿಲ್ಲೆಗೆ ಬಳ್ಳಾರಿಯಿಂದ ಅಂದಾಜು 1,334 ಕಿ ಮೀ ಅಂತರವಿದ್ದು ಕನಿಷ್ಠ 30 ಗಂಟೆ ಕಾಲ ಪ್ರಯಾಣಿಸಬೇಕು’ ಎಂದು ಮಾಹಿತಿ ನೀಡಿದರು.</p>.<p>ಕಾರ್ಮಿಕರ ತಂಡದ ನೇತೃತ್ವ ವಹಿಸಿದ್ದ ವಿಕ್ರಂಸಿಂಗ್ ಬೈಸ್, ‘ನಾವು ಇಲ್ಲೇ ಇದ್ದರೆ ಜೀವನ ನಡೆಸುವುದು ಕಷ್ಟಕರವಾಗುತ್ತದೆ ಎಂಬ ಕಾರಣಕ್ಕೆ ಊರಿಗೆ ಹೋಗುತ್ತಿದ್ದೇವೆ. ರೈಲಿನಲ್ಲಿ ಹೋಗಲು ಆಗದೇ ಹತಾಶರಾಗಿದ್ದ ನಮ್ಮನ್ನು ಬಸ್ನಲ್ಲಿ ಕಳಿಸಿಕೊಡುತ್ತಿರುವುದು ಸಂತೋಷ ತಂದಿದೆ’ ಎಂದರು.</p>.<p><strong>‘ಥ್ಯಾಂಕ್ಸ್ ಟು ಧರ್ಹಣ್ ಗ್ರೂಪ್’:</strong>ಬಸ್ ಹತ್ತುವ ಮುನ್ನ ಕಾರ್ಮಿಕರೆಲ್ಲರೂ ‘ಥ್ಯಾಂಕ್ಸ್ ಟು ಧರಣ್ ಇಂಡಿಯನ್ ಗ್ರೂಪ್’ ಎಂಬ ಫಲಕಗಳನ್ನು ಪ್ರದರ್ಶಿಸಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.</p>.<p>‘ಸಂಸ್ಥೆಯು ಆರ್ಥಿಕ ನೆರವನ್ನು ನೀಡಿದ್ದಕ್ಕೆ, ಜಿಲ್ಲಾಡಳಿತ ಶೀಘ್ರಗತಿಯಲ್ಲಿ ಸ್ಪಂದಿಸಿದ್ದಕ್ಕೆ ಕಾರ್ಮಿಕರನ್ನು ಇಷ್ಟು ಬೇಗ ಅವರ ಊರಿಗೆ ಕಳಿಸಲು ಸಾಧ್ಯವಾಗುತ್ತಿದೆ’ ಎಂದು ಎಂ.ಎ.ಷಕೀಬ್ ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>