ಮೆಟ್ರಿಯಿಂದ ಕಂಪ್ಲಿಗೆ ತಹಶೀಲ್ದಾರ್ ಗೌಸಿಯಾಬೇಗಂ, ಗ್ರಾಮ ಲೆಕ್ಕಾಧಿಕಾರಿ ಜಿಲಾನ್ ಜೀಪ್ನಲ್ಲಿ ತೆರಳುತ್ತಿದ್ದಾಗ ಪ್ರಸ್ತುತ ಅಪಘಾತ ಸಂಭವಿಸಿದ್ದು, ರಕ್ತಸ್ರಾವದಿಂದ ನರಳುತ್ತಿದ್ದ 5 ವರ್ಷದ ಗಂಡು ಮಗು ಕಾರ್ತಿಕ್ ಮತ್ತು ಗಾಯಗೊಂಡ ಬೈಕ್ ಸವಾರ ಮಾರುತಿ (23) ಅರನ್ನು ತಕ್ಷಣ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ.