‘ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ರಸ್ತೆ ಅಗಲೀಕರಣದಲ್ಲಿ ಜೋಗತಿ ಮನೆ ಕಳೆದುಕೊಂಡಿದ್ದಾರೆ. ಸರ್ಕಾರದಿಂದ ಅವರಿಗೆ ಮನೆ ಮಂಜೂರಾಗಿದ್ದು, ಆ ಹಣದಿಂದ ಅರ್ಧ ಕಟ್ಟಡ ನಿರ್ಮಿಸಲು ಅವರಿಗೆ ಸಾಧ್ಯವಾಗಿದೆ. ವಾಸಿಸಲು ಮನೆಯಿಲ್ಲದ ವಿಷಯ ತಿಳಿದು, ನನ್ನ ಕೈಲಾದಷ್ಟು ಅವರಿಗೆ ನೆರವು ನೀಡಿರುವೆ’ ಎಂದು ಮಧುಸೂದನ್ ತಿಳಿಸಿದ್ದಾರೆ.