ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚತಂತ್ರ ಸಿನಿಮಾ ಬಿಡುಗಡೆ ನಾಳೆ

Last Updated 28 ಮಾರ್ಚ್ 2019, 5:04 IST
ಅಕ್ಷರ ಗಾತ್ರ

ಬಳ್ಳಾರಿ: ಯೋಗರಾಜ ಭಟ್ ನಿರ್ದೇಶನದ ಪಂಚತಂತ್ರ‌ ಸಿನಿಮಾ ರಾಜ್ಯದ 180 ಚಿತ್ರಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾಗಲಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮತ್ತು ದಿವ್ಯಶ್ರೀ ತಿಳಿಸಿದರು. ಕಾಮಿಡಿ ಕಿಲಾಡಿಗಳು ಮತ್ತು ಯೋಗರಾಜಭಟ್ ನಡುವೆ ಅವಿನಾಭಾವ ಸಂಬಂಧವಿದೆ. ಅವರಿಂದ ನಮಗೆ ಹೆಚ್ಚಿನ ಖ್ಯಾತಿ ದೊರಕಿದೆ. ಹೀಗಾಗಿ‌ ನಮ್ಮ ತಂಡ ರಾಜ್ಯದಾದ್ಯಂತ ಸಂಚರಿಸಿ ಸಿನಿಮಾ ಪರ 'ಪ್ರಯಾಣ-ಪ್ರಚಾರ' ಶೀರ್ಷಿಕೆ ಅಡಿ ಪ್ರಚಾರ ನಡೆಸಿದ್ದೇವೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಯೋಗರಾಜ‌ಭಟ್ಟರಿಗೆ ಗುರುದಕ್ಷಿಣೆ ರೂಪದಲ್ಲಿ ಪಂಚತಂತ್ರ ಸಿನಿಮಾದ ಪರ ಪ್ರಚಾರ ಮಾಡುತ್ತಿದ್ದೇವೆ. ಹಿರಿಯ ಮತ್ತು ಕಿರಿಯ ತಲೆಮಾರಿನ ನಡುವಿನ ಸಂಘರ್ಷವೇ ಸಿನಿಮಾದ ತಿರುಳು ಎಂದು ದಿವ್ಯಶ್ರೀ ಹೇಳಿದರು. ತಂಡದ ಸೂರ್ಯ ಕುಂದಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT