ಬಳ್ಳಾರಿ: ತೀವ್ರ ಕುತೂಹಲ ಕೆರಳಿಸಿದ್ದವಿಜಯನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಜಯದ ನಗೆಬೀರಿದ್ದಾರೆ.ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಗಳ ನಡುವಣ ನೇರ ಪೈಪೋಟ ಈ ಕ್ಷೇತ್ರದಲ್ಲಿ ಅವರು 30 ಸಾವಿರಕ್ಕೂ ಹೆಚ್ಚುಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆನಂದ್, ಈ ಬಾರಿ ಒಟ್ಟು 85,332 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್ನ ವಿ.ವೈ.ಘೋರ್ಪಡೆ 55,270 ಮತಗಳನ್ನು ಪಡೆದುಕೊಂಡರು. ಜೆಡಿಎಸ್ ಅಭ್ಯರ್ಥಿಎನ್.ಎಂ.ನಬಿ ಕೇವಲ 3,871 ಮತ ಪಡೆದರು.1,813 ಮಂದಿ ನೋಟಾ ಚಲಾಯಿಸಿದ್ದಾರೆ.
2018ರ ಚುನಾವಣೆಯಲ್ಲಿ83,214 ಮತಗಳನ್ನು ಪಡೆದಿದ್ದ ಆನಂದ್ ಸಿಂಗ್, ಬಿಜೆಪಿಯ ಎಚ್.ಆರ್.ಗವಿಯಪ್ಪ(74,986) ವಿರುದ್ಧ8,228 ಮತಗಳ ಅಂತರಿಂದ ಗೆದ್ದಿದ್ದರು.