<p><strong>ಕಂಪ್ಲಿ:</strong> ವಿಜಯನಗರ ಜನಪದ ಶೈಲಿ ಮತ್ತು ಕಿನ್ನಾಳ ಕಲೆ ಚಿತ್ರಕಲಾವಿದ ಪರಶುರಾಮಪ್ಪ (75) ಅನಾರೋಗ್ಯದಿಂದ ಬುಧವಾರ ನಿಧನರಾದರು.</p>.<p>ಚಿತ್ರಗಾರ ಪರಶುರಾಮಪ್ಪ ಅವರು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗ ಅವರ ಮಾವನವರಾದ ರಾಮಣ್ಣ ಚಿತ್ರಗಾರರಿಂದ ಕಲೆಯ ಸಂಸ್ಕಾರ ಪಡೆದರು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳದೆ ಇಡೀ ಜೀವನವನ್ನೇ ಕಲೆಗಾಗಿ ಮುಡಿಪಿಟ್ಟಿದ್ದರು.</p>.<p>ಅವರು ಕೈಯಲ್ಲಿ ಉಳಿ, ಕೊಡತೆ ಹಿಡಿದರೆಂದರೆ ಬರಡು ಮರವು ಕಲಾಕೃತಿಯಾಗಿ ಹೊರಹೊಮ್ಮುತ್ತಿತ್ತು. ಕಾಷ್ಠ, ಮಣ್ಣಿನ ಮೂರ್ತಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದರು.</p>.<p>ಪ್ರಾಣಿ, ಮನುಷ್ಯರ ಮುಖವಾಡಗಳನ್ನು ಆಕರ್ಷಕವಾಗಿ ತಯಾರಿಸುತ್ತಿದ್ದರು. ದೇವತೆಗಳ ಅಲಂಕೃತ ಛತ್ರಿ ಛಾಮರಗಳನ್ನು, ಕುಂಚದಿಂದ ಚಿತ್ತಾರ, ಬಳ್ಳಿಗಳನ್ನು ಚಿತ್ರಿಸುವಲ್ಲಿ, ಬಯಲಾಟ, ನಾಟಕದ ಪಾತ್ರದಾರಿಗಳಿಗೆ ಪ್ರಸಾಧನ(ಮೇಕಪ್) ಸೇವೆ ಒದಗಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.</p>.<p>ಗೋಡೆಗಳ ಮೇಲೆ ಪ್ರಕೃತಿ ಚಿತ್ರ, ಮದುವೆ ಮನೆಯಲ್ಲಿ ಸಾಸ್ವಿಕಟ್ಟೆ, ಐದಗಿತ್ತಿಯರ ಚಿತ್ರ, ಹಸೆಚಿತ್ರ, ಕಾಮಧೇನು, ಕಲ್ಪವೃಕ್ಷ ಜನಪದ ಚಿತ್ರಕಲೆ, ದೇವಸ್ಥಾನಗಳ ಗೋಪುರಗಳಿಗೆ ಬಣ್ಣ ನೀಡುವಲ್ಲಿ ಪರಶುರಾಮಪ್ಪ ಕೌಶಲ ಮೆರೆದಿದ್ದರು.</p>.<p>ಜಾತ್ರೆಯ ರಥಗಳಿಗೆ ಗೊಂಬೆಗಳನ್ನು ಕಟ್ಟಿ ಅಲಂಕರಿಸುವ, ಅಡ್ಡಪಲ್ಲಕ್ಕಿಗಳಿಗೆ ವಿವಿಧ ಫಲಪುಷ್ಪಗಳಿಂದ ಸಿಂಗರಿಸುವ ಮತ್ತು ದಸರಾ ನವರಾತ್ರಿಯಲ್ಲಿ ಗೊಂಬೆಗಳ ಪ್ರದರ್ಶಿಸುತ್ತಿದ್ದ, ಗ್ರಾಮ ದೇವತೆಗಳನ್ನು ತಯಾರಿಸಿ ನೈಜ ಬಣ್ಣ ಬಳಿದು ಜೀವಕಳೆ ತುಂಬುತ್ತಿದ್ದ ಅವರು ಇನ್ನು ನೆನಪು ಮಾತ್ರ.</p>.<p>ಕಲೆಯನ್ನೆ ಉಸಿರಾಗಿಸಿಕೊಂಡಿದ್ದ ಪರಶುರಾಮಪ್ಪ ಅವರಿಗೆ ಪತ್ನಿ ಸುಮಿತ್ರಮ್ಮ ಮತ್ತು ಮಕ್ಕಳು ಸಹಕರಿಸುತ್ತಿದ್ದರು.</p>.<p>ದೆಹಲಿಯ ಡಿಜಿಟಲ್ ಹಂಪಿ ವರ್ಕ್ ಶಾಪ್ ಮತ್ತು ಎಕ್ಜಿಬಿಷನ್ ಅಟ್ ಇಂಡಿಯಾ ಹೆಬಿಟ್ಯಾಟ್ ಸೆಂಟರ್, ಹೊಸ ಮಲಪನಗುಡಿಯ ಹಂಪಿ ಹೆರಿಟೇಜ್ ಹೊಟೇಲ್, ಮೈಸೂರು ದಸರಾ ಸೇರಿ ವಿವಿಧೆಡೆ ಅವರ ಕಲಾಕೃತಿಗಳ ಪ್ರದರ್ಶನ ನಡೆದಿತ್ತು.</p>.<p>‘ಕಲಾ ಕೇಸರಿ’, ‘ಪೇಟೆ ಬಸವಶ್ರೀ’ ಪ್ರಶಸ್ತಿ, ‘ಚಿತ್ರಕಲಾ ಸೇವಾ ಭಾರ್ಗವ’, ‘ನಿಮಿಷಾಂಬಾ ಶ್ರೀ’, ‘ಕರಿಸಿದ್ದ ಶ್ರೀ’ ಪ್ರಶಸ್ತಿ ಪುರಸ್ಕೃತರಾಗಿದ್ದರು.</p>.<p>ಹೊಸಪೇಟೆಯ ಆಕಾಶವಾಣಿ, ಚಂದನ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಅವರ ಸಂದರ್ಶನಗಳು ಪ್ರಸಾರಗೊಂಡಿವೆ.</p>.<p>ಕ್ಯಾಲಿಫೋರ್ನಿಯ ಯಾಲೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಬೆಂಗಳೂರು ದಯಾನಂದ ಸಾಗರ ಕಾಲೇಜ್ ಆಫ್ ಆರ್ಕಿಟೆಕ್ಟ್ ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯದ ಸಲುವಾಗಿ ಪರಶುರಾಮಪ್ಪ ಅವರ ಮನೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ಕಿರು ಸಂಶೋಧನ ಕೃತಿಗಳನ್ನು ರಚಿಸಿರುವುದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ:</strong> ವಿಜಯನಗರ ಜನಪದ ಶೈಲಿ ಮತ್ತು ಕಿನ್ನಾಳ ಕಲೆ ಚಿತ್ರಕಲಾವಿದ ಪರಶುರಾಮಪ್ಪ (75) ಅನಾರೋಗ್ಯದಿಂದ ಬುಧವಾರ ನಿಧನರಾದರು.</p>.<p>ಚಿತ್ರಗಾರ ಪರಶುರಾಮಪ್ಪ ಅವರು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗ ಅವರ ಮಾವನವರಾದ ರಾಮಣ್ಣ ಚಿತ್ರಗಾರರಿಂದ ಕಲೆಯ ಸಂಸ್ಕಾರ ಪಡೆದರು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳದೆ ಇಡೀ ಜೀವನವನ್ನೇ ಕಲೆಗಾಗಿ ಮುಡಿಪಿಟ್ಟಿದ್ದರು.</p>.<p>ಅವರು ಕೈಯಲ್ಲಿ ಉಳಿ, ಕೊಡತೆ ಹಿಡಿದರೆಂದರೆ ಬರಡು ಮರವು ಕಲಾಕೃತಿಯಾಗಿ ಹೊರಹೊಮ್ಮುತ್ತಿತ್ತು. ಕಾಷ್ಠ, ಮಣ್ಣಿನ ಮೂರ್ತಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದರು.</p>.<p>ಪ್ರಾಣಿ, ಮನುಷ್ಯರ ಮುಖವಾಡಗಳನ್ನು ಆಕರ್ಷಕವಾಗಿ ತಯಾರಿಸುತ್ತಿದ್ದರು. ದೇವತೆಗಳ ಅಲಂಕೃತ ಛತ್ರಿ ಛಾಮರಗಳನ್ನು, ಕುಂಚದಿಂದ ಚಿತ್ತಾರ, ಬಳ್ಳಿಗಳನ್ನು ಚಿತ್ರಿಸುವಲ್ಲಿ, ಬಯಲಾಟ, ನಾಟಕದ ಪಾತ್ರದಾರಿಗಳಿಗೆ ಪ್ರಸಾಧನ(ಮೇಕಪ್) ಸೇವೆ ಒದಗಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.</p>.<p>ಗೋಡೆಗಳ ಮೇಲೆ ಪ್ರಕೃತಿ ಚಿತ್ರ, ಮದುವೆ ಮನೆಯಲ್ಲಿ ಸಾಸ್ವಿಕಟ್ಟೆ, ಐದಗಿತ್ತಿಯರ ಚಿತ್ರ, ಹಸೆಚಿತ್ರ, ಕಾಮಧೇನು, ಕಲ್ಪವೃಕ್ಷ ಜನಪದ ಚಿತ್ರಕಲೆ, ದೇವಸ್ಥಾನಗಳ ಗೋಪುರಗಳಿಗೆ ಬಣ್ಣ ನೀಡುವಲ್ಲಿ ಪರಶುರಾಮಪ್ಪ ಕೌಶಲ ಮೆರೆದಿದ್ದರು.</p>.<p>ಜಾತ್ರೆಯ ರಥಗಳಿಗೆ ಗೊಂಬೆಗಳನ್ನು ಕಟ್ಟಿ ಅಲಂಕರಿಸುವ, ಅಡ್ಡಪಲ್ಲಕ್ಕಿಗಳಿಗೆ ವಿವಿಧ ಫಲಪುಷ್ಪಗಳಿಂದ ಸಿಂಗರಿಸುವ ಮತ್ತು ದಸರಾ ನವರಾತ್ರಿಯಲ್ಲಿ ಗೊಂಬೆಗಳ ಪ್ರದರ್ಶಿಸುತ್ತಿದ್ದ, ಗ್ರಾಮ ದೇವತೆಗಳನ್ನು ತಯಾರಿಸಿ ನೈಜ ಬಣ್ಣ ಬಳಿದು ಜೀವಕಳೆ ತುಂಬುತ್ತಿದ್ದ ಅವರು ಇನ್ನು ನೆನಪು ಮಾತ್ರ.</p>.<p>ಕಲೆಯನ್ನೆ ಉಸಿರಾಗಿಸಿಕೊಂಡಿದ್ದ ಪರಶುರಾಮಪ್ಪ ಅವರಿಗೆ ಪತ್ನಿ ಸುಮಿತ್ರಮ್ಮ ಮತ್ತು ಮಕ್ಕಳು ಸಹಕರಿಸುತ್ತಿದ್ದರು.</p>.<p>ದೆಹಲಿಯ ಡಿಜಿಟಲ್ ಹಂಪಿ ವರ್ಕ್ ಶಾಪ್ ಮತ್ತು ಎಕ್ಜಿಬಿಷನ್ ಅಟ್ ಇಂಡಿಯಾ ಹೆಬಿಟ್ಯಾಟ್ ಸೆಂಟರ್, ಹೊಸ ಮಲಪನಗುಡಿಯ ಹಂಪಿ ಹೆರಿಟೇಜ್ ಹೊಟೇಲ್, ಮೈಸೂರು ದಸರಾ ಸೇರಿ ವಿವಿಧೆಡೆ ಅವರ ಕಲಾಕೃತಿಗಳ ಪ್ರದರ್ಶನ ನಡೆದಿತ್ತು.</p>.<p>‘ಕಲಾ ಕೇಸರಿ’, ‘ಪೇಟೆ ಬಸವಶ್ರೀ’ ಪ್ರಶಸ್ತಿ, ‘ಚಿತ್ರಕಲಾ ಸೇವಾ ಭಾರ್ಗವ’, ‘ನಿಮಿಷಾಂಬಾ ಶ್ರೀ’, ‘ಕರಿಸಿದ್ದ ಶ್ರೀ’ ಪ್ರಶಸ್ತಿ ಪುರಸ್ಕೃತರಾಗಿದ್ದರು.</p>.<p>ಹೊಸಪೇಟೆಯ ಆಕಾಶವಾಣಿ, ಚಂದನ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಅವರ ಸಂದರ್ಶನಗಳು ಪ್ರಸಾರಗೊಂಡಿವೆ.</p>.<p>ಕ್ಯಾಲಿಫೋರ್ನಿಯ ಯಾಲೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಬೆಂಗಳೂರು ದಯಾನಂದ ಸಾಗರ ಕಾಲೇಜ್ ಆಫ್ ಆರ್ಕಿಟೆಕ್ಟ್ ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯದ ಸಲುವಾಗಿ ಪರಶುರಾಮಪ್ಪ ಅವರ ಮನೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ಕಿರು ಸಂಶೋಧನ ಕೃತಿಗಳನ್ನು ರಚಿಸಿರುವುದು ವಿಶೇಷ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>