‘ಬಳ್ಳಾರಿಯ ಕೃಷ್ಣಾರೆಡ್ಡಿ (73) ಎಂಬುವರು ಗುರುವಾರ ಕಾಲು ಜಾರಿ ಕಾಲುವೆಯಲ್ಲಿ ಬಿದ್ದಿದ್ದರು. ಅಲ್ಲಿಯೇ ಇದ್ದ ಗ್ರಾಮದ ಯುವಕರಾದ ಈರಣ್ಣ, ಬಸವರಾಜ ತಕ್ಷಣವೇ ಕಾಲುವೆಗೆ ಜಿಗಿದು, ಅವರನ್ನು ರಕ್ಷಿಸಿ ಮೇಲೆ ತಂದಿದ್ದಾರೆ. ನಂತರ ಕೆಲಸಮಯ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಕಚೇರಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ’ ಎಂದು ಗ್ರಾಮದ ಬಸವರಾಜ ತಿಳಿಸಿದ್ದಾರೆ.