ಬೆಳಿಗ್ಗೆಯಿಂದ ನಗರದಲ್ಲಿ ಕರ್ಫ್ಯೂ ಇದ್ದು, ಬಹುತೇಕರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹಲವರು ರಾತ್ರಿ 9ಕ್ಕೆ ಹೊರಗೆ ಬರಲು ಯೋಚಿಸುತ್ತಿದ್ದಾರೆ. ಅವರೆಲ್ಲ ಏಕಾಏಕಿ ಮನೆಯಿಂದ ಹೊರಗೆ ಬಂದರೆ ಪುನಃ ಗುಂಪು ಸೇರುವ ಸಾಧ್ಯತೆ ಇರುತ್ತದೆ. ವೈರಾಣು ಸಹ ಹರಡುವ ಸಂಭವವೂ ಇರುತ್ತದೆ. ಇದೇ ಕಾರಣಕ್ಕೆ ನಗರ ಪೊಲೀಸರ ಕಮಿಷನರ್, ಸೆಕ್ಷನ್ 144 (1) ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಭಾನುವಾರ ಹೊರಡಿಸಿದ್ದಾರೆ.