‘ಪ್ರವೀಣ್ ಪಿ. ಷಾ ಪಾಲುದಾರರಾಗಿರುವ ವೆಂಕಟೇಶ್ವರ ಡೆವಲಪರ್ಸ್, ವಿಕ್ರಮ್ ಓಸ್ವಾಲ್ ಪಾಲುದಾರರಾಗಿರುವ ಬಾಲಾಜಿ ಇನ್ ಫ್ರಾಸ್ಟಕ್ಚರ್ಸ್ ಆ್ಯಂಡ್ ಡೆವಲಪರ್ಸ್, ಸಿ.ಟಿ. ತಿಮ್ಮಯ್ಯ, ಸಿ.ಟಿ. ಮರಿರಾಜು ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ರಾಮನಗರದ ಮಾಗಡಿಯ ಕೊಡಿಯಾಲ ಕರೇನ ಹಳ್ಳಿಯಲ್ಲಿ 40 ಎಕರೆ ಭೂಮಿ ಖರೀದಿಸಿ, ಬಿಬಿಎಂಪಿಗಾಗಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸುವುದಾಗಿ ಹೇಳಲಾಗಿತ್ತು. ಈ ಸ್ವತ್ತನ್ನು ‘ಬೆಂಗಳೂರು - ಮೈಸೂರು ಮೂಲಸೌಕರ್ಯ ಮಾರ್ಗ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಮೂಲಕ ಬಿಬಿಎಂಪಿಗೆ ಹಸ್ತಾಂತರಿಸಿ ಟಿಡಿಆರ್ ನೀಡಬೇಕೆಂದು ಪ್ರಸ್ತಾವ ಸಲ್ಲಿಸಿದ್ದರು’ ಎಂದು ಹೇಳಿದರು.