<p><strong>ಬೆಂಗಳೂರು: </strong>ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ₹2,500 ಕೋಟಿಗೂ ಹೆಚ್ಚು ಮೊತ್ತದ ಟಿಡಿಆರ್ ಹಗರಣ ನಡೆದಿದೆ ಎಂದು 9,630 ಪುಟಗಳಷ್ಟು ದಾಖಲೆಯನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಬಿಡುಗಡೆ ಮಾಡಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ರಮೇಶ್ ಅವರು, ‘ಈ ಹಗರಣದಲ್ಲಿ ಬಿಬಿಎಂಪಿ ಹಾಗೂ ಬಿಎಂಐಸಿಎಪಿಎಯ ಅಧಿಕಾರಿಗಳೂ ಭಾಗಿಯಾಗಿದ್ದಾರೆ’ ಎಂದು ದೂರಿದರು.</p>.<p>‘ಪ್ರವೀಣ್ ಪಿ. ಷಾ ಪಾಲುದಾರರಾಗಿರುವ ವೆಂಕಟೇಶ್ವರ ಡೆವಲಪರ್ಸ್, ವಿಕ್ರಮ್ ಓಸ್ವಾಲ್ ಪಾಲುದಾರರಾಗಿರುವ ಬಾಲಾಜಿ ಇನ್ ಫ್ರಾಸ್ಟಕ್ಚರ್ಸ್ ಆ್ಯಂಡ್ ಡೆವಲಪರ್ಸ್, ಸಿ.ಟಿ. ತಿಮ್ಮಯ್ಯ, ಸಿ.ಟಿ. ಮರಿರಾಜು ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ರಾಮನಗರದ ಮಾಗಡಿಯ ಕೊಡಿಯಾಲ ಕರೇನ ಹಳ್ಳಿಯಲ್ಲಿ 40 ಎಕರೆ ಭೂಮಿ ಖರೀದಿಸಿ, ಬಿಬಿಎಂಪಿಗಾಗಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸುವುದಾಗಿ ಹೇಳಲಾಗಿತ್ತು. ಈ ಸ್ವತ್ತನ್ನು ‘ಬೆಂಗಳೂರು - ಮೈಸೂರು ಮೂಲಸೌಕರ್ಯ ಮಾರ್ಗ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಮೂಲಕ ಬಿಬಿಎಂಪಿಗೆ ಹಸ್ತಾಂತರಿಸಿ ಟಿಡಿಆರ್ ನೀಡಬೇಕೆಂದು ಪ್ರಸ್ತಾವ ಸಲ್ಲಿಸಿದ್ದರು’ ಎಂದು ಹೇಳಿದರು.</p>.<p>‘ಇದಾದ ಮೇಲೆ ಹಲವು ಹಿರಿಯ ಅಧಿಕಾರಿಗಳ ಸಹಾಯದಿಂದ ₹65 ಕೋಟಿ ಮೊತ್ತದ ಸ್ವತ್ತಿಗೆ ₹2,644 ಕೋಟಿ ಮೌಲ್ಯದ ಟಿಡಿಆರ್ ಅನ್ನುರಿಗ್ ‘ಎ’ನಲ್ಲಿ ಪಡೆದುಕೊಂಡಿದ್ದಾರೆ. ಇದು ಅತಿದೊಡ್ಡ ಹಗರಣವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ₹2,500 ಕೋಟಿಗೂ ಹೆಚ್ಚು ಮೊತ್ತದ ಟಿಡಿಆರ್ ಹಗರಣ ನಡೆದಿದೆ ಎಂದು 9,630 ಪುಟಗಳಷ್ಟು ದಾಖಲೆಯನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಬಿಡುಗಡೆ ಮಾಡಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ರಮೇಶ್ ಅವರು, ‘ಈ ಹಗರಣದಲ್ಲಿ ಬಿಬಿಎಂಪಿ ಹಾಗೂ ಬಿಎಂಐಸಿಎಪಿಎಯ ಅಧಿಕಾರಿಗಳೂ ಭಾಗಿಯಾಗಿದ್ದಾರೆ’ ಎಂದು ದೂರಿದರು.</p>.<p>‘ಪ್ರವೀಣ್ ಪಿ. ಷಾ ಪಾಲುದಾರರಾಗಿರುವ ವೆಂಕಟೇಶ್ವರ ಡೆವಲಪರ್ಸ್, ವಿಕ್ರಮ್ ಓಸ್ವಾಲ್ ಪಾಲುದಾರರಾಗಿರುವ ಬಾಲಾಜಿ ಇನ್ ಫ್ರಾಸ್ಟಕ್ಚರ್ಸ್ ಆ್ಯಂಡ್ ಡೆವಲಪರ್ಸ್, ಸಿ.ಟಿ. ತಿಮ್ಮಯ್ಯ, ಸಿ.ಟಿ. ಮರಿರಾಜು ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ರಾಮನಗರದ ಮಾಗಡಿಯ ಕೊಡಿಯಾಲ ಕರೇನ ಹಳ್ಳಿಯಲ್ಲಿ 40 ಎಕರೆ ಭೂಮಿ ಖರೀದಿಸಿ, ಬಿಬಿಎಂಪಿಗಾಗಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸುವುದಾಗಿ ಹೇಳಲಾಗಿತ್ತು. ಈ ಸ್ವತ್ತನ್ನು ‘ಬೆಂಗಳೂರು - ಮೈಸೂರು ಮೂಲಸೌಕರ್ಯ ಮಾರ್ಗ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಮೂಲಕ ಬಿಬಿಎಂಪಿಗೆ ಹಸ್ತಾಂತರಿಸಿ ಟಿಡಿಆರ್ ನೀಡಬೇಕೆಂದು ಪ್ರಸ್ತಾವ ಸಲ್ಲಿಸಿದ್ದರು’ ಎಂದು ಹೇಳಿದರು.</p>.<p>‘ಇದಾದ ಮೇಲೆ ಹಲವು ಹಿರಿಯ ಅಧಿಕಾರಿಗಳ ಸಹಾಯದಿಂದ ₹65 ಕೋಟಿ ಮೊತ್ತದ ಸ್ವತ್ತಿಗೆ ₹2,644 ಕೋಟಿ ಮೌಲ್ಯದ ಟಿಡಿಆರ್ ಅನ್ನುರಿಗ್ ‘ಎ’ನಲ್ಲಿ ಪಡೆದುಕೊಂಡಿದ್ದಾರೆ. ಇದು ಅತಿದೊಡ್ಡ ಹಗರಣವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>