‘ಈಗ ಬರುತ್ತಿರುವ ಅಂತರರಾಷ್ಟ್ರೀಯ ಪ್ರಯಾಣಿಕರ ನಿರ್ವಹಣೆಗಾಗಿಯೇ ಒಬ್ಬರು ಹಿರಿಯ ಐಎಎಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಸಲುವಾಗಿಯೇ ಪ್ರತ್ಯೇಕ ಕೌಂಟರ್ ಆರಂಭಿಸಿದ್ದೇವೆ. ಅವರ ಪ್ರತ್ಯೇಕ ವಾಸಕ್ಕೆ ಪಂಚಾತಾರ, ತ್ರಿತಾರಾ ಹಾಗೂ ಸಾಮಾನ್ಯ ಹೋಟೆಲ್ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಪಾವತಿ ಮಾಡಲು ಶಕ್ತರದಲ್ಲದವರು ಉಳಿದುಕೊಳ್ಳುವುದಕ್ಕೆ ಹಾಸ್ಟೆಲ್ಗಳು, ಕಲ್ಯಾಣಮಂಟಪಗಳು, ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಿದ್ದೇವೆ’ ಎಂದರು.