ಅಯೋಧ್ಯಾ ಪಬ್ಲಿಕೇಶನ್ಸ್ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಹಿಂದೂ ಎಂದರೇನು?’, ‘ಎದ್ದೇಳು ಭಾರತೀಯ’, ‘ಸ್ವಾಮಿ ಸಿದ್ಧೇಶ್ವರರ ಕಥೆಗಳು’ ಹಾಗೂ ‘ಧಮ್ಮಪದ’ ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು. ‘ಬುದ್ಧ ಪ್ರೇಮದ ಸಂದೇಶವನ್ನು ಜಗತ್ತಿಗೆಲ್ಲ ಸಾರಿದ. ಆತನು ಜೇತವನದಲ್ಲಿ ಶ್ರಮಣರಿಗೆ ನೀಡಿದ ಸಂದೇಶಗಳ ಸಾರ ಸಂಗ್ರಹವೇ ಧಮ್ಮಪದ. ಇದರಲ್ಲಿರುವ ಒಂದೊಂದು ಗಾಹೆಯೂ ಮನನ ಮತ್ತು ಅನುಸರಣೆಗೆ ಯೋಗ್ಯವಾದದ್ದು. ಜಗತ್ತಿನ ವ್ಯಕ್ತಿಗಳೆಲ್ಲರೂ ಧಮ್ಮಪದದ ಗಾಹೆಗಳನ್ನು ಅನುಸಂಧಾನ ಮಾಡಿಕೊಂಡು, ಬಾಳುವೆ ಮಾಡಿದರೆ ಜಗತ್ತಿನ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ’ ಎಂದು ಹೇಳಿದರು.