<p><strong>ಬೆಂಗಳೂರು:</strong> ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಯು ನವೋದ್ಯಮಿಗಳನ್ನು ಪ್ರೋತ್ಸಾಹಿಸಲು ವಿಕಸನ ಕೇಂದ್ರ (ಎವಲ್ಯೂಟ್) ಆರಂಭಿಸಿದ್ದು, 24 ನವೋದ್ಯಮಗಳಿಗೆ ತಲಾ ₹50 ಲಕ್ಷದವರೆಗೆ ನೆರವು ನೀಡಲಿದೆ. ಅಲ್ಲದೆ, ಇದೇ 23ರಂದು ಈ ನವೋದ್ಯಮಗಳಿಗೆ ‘ಸ್ಟಾರ್ ಸ್ಟಾರ್ಟ್ಅಪ್’ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಿದೆ.</p>.<p>‘ಭವಿಷ್ಯದ ನವೋದ್ಯಮಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ವಿಕಸನ ಕೇಂದ್ರ ರಚಿಸಲಾಗಿದೆ. ಆಯ್ಕೆಯಾದ ನವೋದ್ಯಮದ ಸಮಗ್ರ ರೀತಿಯ ಅಭಿವೃದ್ಧಿಗೆ ₹50 ಲಕ್ಷದವರೆಗೆ ಧನಸಹಾಯ ಹಾಗೂ ಇತರೆ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹೆ ನೀಡಲಾಗುವುದು’ ಎಂದು ರಾಮಯ್ಯ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ಉದ್ಯಮ ಚಿಂತನೆ ಹೊಂದಿರುವ ಭವಿಷ್ಯದ ನವೋದ್ಯಮಿಗಳಿಂದ ಮೇ–ಜೂನ್ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ದೇಶದಾದ್ಯಂತ 160ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿಗಳನ್ನು ಉನ್ನತ ಮಟ್ಟದ ಉದ್ಯಮಿಗಳನ್ನೊಳಗೊಂಡ ತೀರ್ಪುಗಾರರ ತಂಡ ಪರಿಶೀಲಿಸಿತ್ತು. ಅಂತಿಮವಾಗಿ 24 ನವೋದ್ಯಮಿಗಳನ್ನು ಆಯ್ಕೆ ಮಾಡಲಾಗಿದೆ’<br />ಎಂದರು.</p>.<p>‘ದೇಶದ 24 ನವೋದ್ಯಮಿಗಳ ಪೈಕಿ, 16 ಉದ್ಯಮಿಗಳು ರಾಜ್ಯದವರೇ ಇದ್ದಾರೆ. ಎಂ.ಎಸ್. ರಾಮಯ್ಯ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳೂ ಇದರಲ್ಲಿದ್ದಾರೆ’ ಎಂದು ಹೇಳಿದರು.</p>.<p>ವಿಕಸನ ಕೇಂದ್ರದ ಸಲಹೆಗಾರ ಸಮರ್ಥ ನಾಗಭೂಷಣಂ, ‘ಮಾರ್ಚ್ನಿಂದ ವಿಕಸನ ಕೇಂದ್ರ ಕಾರ್ಯಾರಂಭ ಮಾಡಿತು. ನವೋದ್ಯಮ ಆರಂಭಿಸುವವರಿಗೆ ಎಲ್ಲ ರೀತಿಯ ಸಲಹೆ ಮತ್ತು ಮಾರ್ಗದರ್ಶನದಜತೆಗೆ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶವನ್ನು ಕೇಂದ್ರ ಹೊಂದಿದೆ. ಈ ನಿಟ್ಟಿನಲ್ಲಿ, ಆಯ್ದ 24 ನವೋದ್ಯಮಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ.ಈ ಕಂಪನಿಗಳ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಾಗುವುದು. ಈ ಪ್ರಕ್ರಿಯೆ ಪ್ರತಿ ವರ್ಷವೂ ನಡೆಯಲಿದೆ’ ಎಂದರು.</p>.<p>ಕೇಂದ್ರದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುರಳೀಕೃಷ್ಣನ್ ಗೋಪಾಲಕೃಷ್ಣನ್ ಇದ್ದರು.</p>.<p>ಈ ಪ್ರಶಸ್ತಿ ಪ್ರದಾನ ಸಮಾರಂಭವು ಸೋಮವಾರ ಬೆಳಿಗ್ಗೆ 11.30ಕ್ಕೆ ರಾಮಯ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಯು ನವೋದ್ಯಮಿಗಳನ್ನು ಪ್ರೋತ್ಸಾಹಿಸಲು ವಿಕಸನ ಕೇಂದ್ರ (ಎವಲ್ಯೂಟ್) ಆರಂಭಿಸಿದ್ದು, 24 ನವೋದ್ಯಮಗಳಿಗೆ ತಲಾ ₹50 ಲಕ್ಷದವರೆಗೆ ನೆರವು ನೀಡಲಿದೆ. ಅಲ್ಲದೆ, ಇದೇ 23ರಂದು ಈ ನವೋದ್ಯಮಗಳಿಗೆ ‘ಸ್ಟಾರ್ ಸ್ಟಾರ್ಟ್ಅಪ್’ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಿದೆ.</p>.<p>‘ಭವಿಷ್ಯದ ನವೋದ್ಯಮಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ವಿಕಸನ ಕೇಂದ್ರ ರಚಿಸಲಾಗಿದೆ. ಆಯ್ಕೆಯಾದ ನವೋದ್ಯಮದ ಸಮಗ್ರ ರೀತಿಯ ಅಭಿವೃದ್ಧಿಗೆ ₹50 ಲಕ್ಷದವರೆಗೆ ಧನಸಹಾಯ ಹಾಗೂ ಇತರೆ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹೆ ನೀಡಲಾಗುವುದು’ ಎಂದು ರಾಮಯ್ಯ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ಉದ್ಯಮ ಚಿಂತನೆ ಹೊಂದಿರುವ ಭವಿಷ್ಯದ ನವೋದ್ಯಮಿಗಳಿಂದ ಮೇ–ಜೂನ್ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ದೇಶದಾದ್ಯಂತ 160ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿಗಳನ್ನು ಉನ್ನತ ಮಟ್ಟದ ಉದ್ಯಮಿಗಳನ್ನೊಳಗೊಂಡ ತೀರ್ಪುಗಾರರ ತಂಡ ಪರಿಶೀಲಿಸಿತ್ತು. ಅಂತಿಮವಾಗಿ 24 ನವೋದ್ಯಮಿಗಳನ್ನು ಆಯ್ಕೆ ಮಾಡಲಾಗಿದೆ’<br />ಎಂದರು.</p>.<p>‘ದೇಶದ 24 ನವೋದ್ಯಮಿಗಳ ಪೈಕಿ, 16 ಉದ್ಯಮಿಗಳು ರಾಜ್ಯದವರೇ ಇದ್ದಾರೆ. ಎಂ.ಎಸ್. ರಾಮಯ್ಯ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳೂ ಇದರಲ್ಲಿದ್ದಾರೆ’ ಎಂದು ಹೇಳಿದರು.</p>.<p>ವಿಕಸನ ಕೇಂದ್ರದ ಸಲಹೆಗಾರ ಸಮರ್ಥ ನಾಗಭೂಷಣಂ, ‘ಮಾರ್ಚ್ನಿಂದ ವಿಕಸನ ಕೇಂದ್ರ ಕಾರ್ಯಾರಂಭ ಮಾಡಿತು. ನವೋದ್ಯಮ ಆರಂಭಿಸುವವರಿಗೆ ಎಲ್ಲ ರೀತಿಯ ಸಲಹೆ ಮತ್ತು ಮಾರ್ಗದರ್ಶನದಜತೆಗೆ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶವನ್ನು ಕೇಂದ್ರ ಹೊಂದಿದೆ. ಈ ನಿಟ್ಟಿನಲ್ಲಿ, ಆಯ್ದ 24 ನವೋದ್ಯಮಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ.ಈ ಕಂಪನಿಗಳ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಾಗುವುದು. ಈ ಪ್ರಕ್ರಿಯೆ ಪ್ರತಿ ವರ್ಷವೂ ನಡೆಯಲಿದೆ’ ಎಂದರು.</p>.<p>ಕೇಂದ್ರದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುರಳೀಕೃಷ್ಣನ್ ಗೋಪಾಲಕೃಷ್ಣನ್ ಇದ್ದರು.</p>.<p>ಈ ಪ್ರಶಸ್ತಿ ಪ್ರದಾನ ಸಮಾರಂಭವು ಸೋಮವಾರ ಬೆಳಿಗ್ಗೆ 11.30ಕ್ಕೆ ರಾಮಯ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>