ವಿಕಸನ ಕೇಂದ್ರದ ಸಲಹೆಗಾರ ಸಮರ್ಥ ನಾಗಭೂಷಣಂ, ‘ಮಾರ್ಚ್ನಿಂದ ವಿಕಸನ ಕೇಂದ್ರ ಕಾರ್ಯಾರಂಭ ಮಾಡಿತು. ನವೋದ್ಯಮ ಆರಂಭಿಸುವವರಿಗೆ ಎಲ್ಲ ರೀತಿಯ ಸಲಹೆ ಮತ್ತು ಮಾರ್ಗದರ್ಶನದಜತೆಗೆ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶವನ್ನು ಕೇಂದ್ರ ಹೊಂದಿದೆ. ಈ ನಿಟ್ಟಿನಲ್ಲಿ, ಆಯ್ದ 24 ನವೋದ್ಯಮಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ.ಈ ಕಂಪನಿಗಳ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಾಗುವುದು. ಈ ಪ್ರಕ್ರಿಯೆ ಪ್ರತಿ ವರ್ಷವೂ ನಡೆಯಲಿದೆ’ ಎಂದರು.