<p><strong>ಬೆಂಗಳೂರು: </strong>ರಾಜಾಜಿನಗರದ ನಾಗರಾಜ್ ಸ್ಮಾರಕ ಹೆರಿಗೆ ಆಸ್ಪತ್ರೆಯಲ್ಲಿ ಹೊಸ ವರ್ಷದ ಮೊದಲ ದಿನ ಪುಷ್ಪಾ ಗೋಪಿ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ₹5 ಲಕ್ಷ ಮೊತ್ತವನ್ನು ಮೇಯರ್ ಆರ್.ಸಂಪತ್ ರಾಜ್ ಸೋಮವಾರ ವಿತರಿಸಿದರು.</p>.<p>ಪಾಲಿಕೆಯ ಆಸ್ಪತ್ರೆಯಲ್ಲಿ ಹೊಸ ವರ್ಷದ ದಿನ ಮೊದಲು ಹುಟ್ಟುವ ಹೆಣ್ಣು ಮಗುವಿಗೆ ₹5 ಲಕ್ಷ ನೀಡುವುದಾಗಿ ಮೇಯರ್ ಘೋಷಿಸಿದ್ದರು. ಪುಷ್ಪಾ ಅವರು ಭಾನುವಾರ ಮಧ್ಯರಾತ್ರಿ 12.05ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.</p>.<p>ಆಸ್ಪತ್ರೆಗೆ ಭೇಟಿ ನೀಡಿದ ಸಂಪತ್ ರಾಜ್ ಅವರು ಪುಷ್ಪಾ ಅವರಿಗೆ ಶುಭಾಶಯ ಕೋರಿದರು. ಮಗುವಿನ ಹೆಸರಿನಲ್ಲಿ ಈ ಹಣವನ್ನು ಠೇವಣಿ ಇಟ್ಟು, ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.</p>.<p>‘ರಾಜಾಜಿನಗರದ 6ನೇ ಬ್ಲಾಕ್ನಲ್ಲಿರುವ ಎನ್ಜಿಒ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದೇವೆ. ಪಾಲಿಕೆಯವರು ಮೊದಲ ಹೆಣ್ಣು ಮಗುವಿಗೆ ₹5 ಲಕ್ಷ ನೀಡುವ ಕುರಿತು ಮಾಹಿತಿ ಇರಲಿಲ್ಲ. ಮಗು ಹುಟ್ಟಿದ ತಕ್ಷಣ ಹಣ ಕೊಡುವ ಬಗ್ಗೆ ವೈದ್ಯರು ಹೇಳಿದ್ದರು. ಆದರೆ, ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ’ ಎಂದು ಪುಷ್ಪಾ ಅವರು ತಮ್ಮ ಅನುಭವ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜಾಜಿನಗರದ ನಾಗರಾಜ್ ಸ್ಮಾರಕ ಹೆರಿಗೆ ಆಸ್ಪತ್ರೆಯಲ್ಲಿ ಹೊಸ ವರ್ಷದ ಮೊದಲ ದಿನ ಪುಷ್ಪಾ ಗೋಪಿ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ₹5 ಲಕ್ಷ ಮೊತ್ತವನ್ನು ಮೇಯರ್ ಆರ್.ಸಂಪತ್ ರಾಜ್ ಸೋಮವಾರ ವಿತರಿಸಿದರು.</p>.<p>ಪಾಲಿಕೆಯ ಆಸ್ಪತ್ರೆಯಲ್ಲಿ ಹೊಸ ವರ್ಷದ ದಿನ ಮೊದಲು ಹುಟ್ಟುವ ಹೆಣ್ಣು ಮಗುವಿಗೆ ₹5 ಲಕ್ಷ ನೀಡುವುದಾಗಿ ಮೇಯರ್ ಘೋಷಿಸಿದ್ದರು. ಪುಷ್ಪಾ ಅವರು ಭಾನುವಾರ ಮಧ್ಯರಾತ್ರಿ 12.05ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.</p>.<p>ಆಸ್ಪತ್ರೆಗೆ ಭೇಟಿ ನೀಡಿದ ಸಂಪತ್ ರಾಜ್ ಅವರು ಪುಷ್ಪಾ ಅವರಿಗೆ ಶುಭಾಶಯ ಕೋರಿದರು. ಮಗುವಿನ ಹೆಸರಿನಲ್ಲಿ ಈ ಹಣವನ್ನು ಠೇವಣಿ ಇಟ್ಟು, ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.</p>.<p>‘ರಾಜಾಜಿನಗರದ 6ನೇ ಬ್ಲಾಕ್ನಲ್ಲಿರುವ ಎನ್ಜಿಒ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದೇವೆ. ಪಾಲಿಕೆಯವರು ಮೊದಲ ಹೆಣ್ಣು ಮಗುವಿಗೆ ₹5 ಲಕ್ಷ ನೀಡುವ ಕುರಿತು ಮಾಹಿತಿ ಇರಲಿಲ್ಲ. ಮಗು ಹುಟ್ಟಿದ ತಕ್ಷಣ ಹಣ ಕೊಡುವ ಬಗ್ಗೆ ವೈದ್ಯರು ಹೇಳಿದ್ದರು. ಆದರೆ, ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ’ ಎಂದು ಪುಷ್ಪಾ ಅವರು ತಮ್ಮ ಅನುಭವ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>