<p><strong>ಬೆಂಗಳೂರು:</strong> ಸಾಲದ ಸಮಸ್ಯೆ ಹಾಗೂ ಪ್ರೇಮ ವೈಫಲ್ಯದಿಂದ ಖಿನ್ನತೆಗೆ ಒಳಗಾಗಿದ್ದ ಖಾಸಗಿ ಕಂಪನಿ ಉದ್ಯೋಗಿ ರಾಜೇಶ್ (26) ಎಂಬುವರು ಶುಕ್ರವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಜೆ.ಸಿ.ನಗರದ ಕುರುಬರಹಳ್ಳಿ ನಿವಾಸಿಯಾದ ರಾಜೇಶ್, ಆತ್ಮಹತ್ಯೆಗೂ ಮುನ್ನ 2.49 ನಿಮಿಷಗಳ ಸೆಲ್ಫಿ ವಿಡಿಯೊ ಮಾಡಿಟ್ಟಿದ್ದಾರೆ.</p>.<p>‘ಕಿರಣ್ ಅವರೇ ಫೈನಾನ್ಸ್ ತಗೊಂಡಿದ್ದು ನಾನು. ದಯವಿಟ್ಟು ನನ್ನ ಕುಟುಂಬ ಸದಸ್ಯರಿಗೆ ತೊಂದರೆ ಕೊಡಬೇಡಿ. ಯಾರೂ ಫೈನಾನ್ಶಿಯರ್ಗಳ ಬಳಿ ಸಾಲ ಮಾಡಬೇಡಿ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.</p>.<p>‘ನೀನು ತುಂಬ ನೋವು ಕೊಟ್ಟೆ ಕಣೆ. ನನ್ನ ಜತೆಯೇ ಇರುತ್ತೀಯಾ ಎಂದುಕೊಂಡಿದ್ದೆ. ಅರ್ಧಕ್ಕೇ ಬಿಟ್ಟು ಹೋಗಿ ದೊಡ್ಡ ತಪ್ಪು ಮಾಡಿದೆ. ಅಪ್ಪ–ಅಮ್ಮ ಕ್ಷಮಿಸಿ. ನಾನು ಸಾಯುತ್ತಿದ್ದೇನೆ’ ಎಂದೂ ಹೇಳಿದ್ದಾರೆ.</p>.<p>ರಾಜೇಶ್ ಪೋಷಕರು ಸಂಜೆ ದೇವಸ್ಥಾನಕ್ಕೆ ಹೋಗಿದ್ದರು. ರಾತ್ರಿ 7.15ಕ್ಕೆ ಸೆಲ್ಫಿ ವಿಡಿಯೊ ಮಾಡಿರುವ ಅವರು, ನಂತರ ಕೋಣೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ತಮ್ಮ ಪ್ರದೀಪ್ ಕೆಲಸದಿಂದ 8 ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಅನುಮಾನಾಸ್ಪದ ಸಾವು (174ಸಿ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಮಹಾಲಕ್ಷ್ಮಿಲೇಔಟ್<br /> ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಾಲದ ಸಮಸ್ಯೆ ಹಾಗೂ ಪ್ರೇಮ ವೈಫಲ್ಯದಿಂದ ಖಿನ್ನತೆಗೆ ಒಳಗಾಗಿದ್ದ ಖಾಸಗಿ ಕಂಪನಿ ಉದ್ಯೋಗಿ ರಾಜೇಶ್ (26) ಎಂಬುವರು ಶುಕ್ರವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಜೆ.ಸಿ.ನಗರದ ಕುರುಬರಹಳ್ಳಿ ನಿವಾಸಿಯಾದ ರಾಜೇಶ್, ಆತ್ಮಹತ್ಯೆಗೂ ಮುನ್ನ 2.49 ನಿಮಿಷಗಳ ಸೆಲ್ಫಿ ವಿಡಿಯೊ ಮಾಡಿಟ್ಟಿದ್ದಾರೆ.</p>.<p>‘ಕಿರಣ್ ಅವರೇ ಫೈನಾನ್ಸ್ ತಗೊಂಡಿದ್ದು ನಾನು. ದಯವಿಟ್ಟು ನನ್ನ ಕುಟುಂಬ ಸದಸ್ಯರಿಗೆ ತೊಂದರೆ ಕೊಡಬೇಡಿ. ಯಾರೂ ಫೈನಾನ್ಶಿಯರ್ಗಳ ಬಳಿ ಸಾಲ ಮಾಡಬೇಡಿ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.</p>.<p>‘ನೀನು ತುಂಬ ನೋವು ಕೊಟ್ಟೆ ಕಣೆ. ನನ್ನ ಜತೆಯೇ ಇರುತ್ತೀಯಾ ಎಂದುಕೊಂಡಿದ್ದೆ. ಅರ್ಧಕ್ಕೇ ಬಿಟ್ಟು ಹೋಗಿ ದೊಡ್ಡ ತಪ್ಪು ಮಾಡಿದೆ. ಅಪ್ಪ–ಅಮ್ಮ ಕ್ಷಮಿಸಿ. ನಾನು ಸಾಯುತ್ತಿದ್ದೇನೆ’ ಎಂದೂ ಹೇಳಿದ್ದಾರೆ.</p>.<p>ರಾಜೇಶ್ ಪೋಷಕರು ಸಂಜೆ ದೇವಸ್ಥಾನಕ್ಕೆ ಹೋಗಿದ್ದರು. ರಾತ್ರಿ 7.15ಕ್ಕೆ ಸೆಲ್ಫಿ ವಿಡಿಯೊ ಮಾಡಿರುವ ಅವರು, ನಂತರ ಕೋಣೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ತಮ್ಮ ಪ್ರದೀಪ್ ಕೆಲಸದಿಂದ 8 ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಅನುಮಾನಾಸ್ಪದ ಸಾವು (174ಸಿ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಮಹಾಲಕ್ಷ್ಮಿಲೇಔಟ್<br /> ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>