ಬೆಂಗಳೂರು: ಬ್ಲಿಸ್ ಆ್ಯಂಡ್ ಸ್ಮೈಲ್ ಸಂಸ್ಥೆ ಹಾಗೂ ಕೌಸ್ತುಭ ಪ್ರತಿಷ್ಠಾನದ ಸಹಯೋಗದಲ್ಲಿ ಅಂಗವಿಕಲರು ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಮೈದಾನದಲ್ಲಿ ಭಾನುವಾರ ಕಾರು ರ್ಯಾಲಿ ನಡೆಸಿದರು.
ಭೈರಸಂದ್ರ ಪಾಲಿಕೆ ಸದಸ್ಯಎನ್.ನಾಗರಾಜು ಹಾಗೂ ನಟಿ ಮಯೂರಿ ಅವರು ರ್ಯಾಲಿಗೆ ಚಾಲನೆ ನೀಡಿದರು. ಮೈದಾನದ ಬಳಿಯಿಂದ ಹೊರಟ ರ್ಯಾಲಿಯು ಜಯನಗರ 4ನೇ ಹಂತ, ಸೌತ್ ಎಂಡ್ ವೃತ್ತ, ಜೆ.ಪಿ.ನಗರದ ಮೂಲಕ ಸಾಗಿ ಅದೇ ಮಾರ್ಗದ ಮೂಲಕ ಮೈದಾನವನ್ನು ಸೇರಿತು.
ಅಂಧರು, ಅಂಗವಿಕಲರು ಬ್ರೈಲ್ ನಕ್ಷೆ ಬಳಸಿ, ಸಹಾಯಕರ ನೆರವಿನಿಂದ ಕಾರು ಚಲಾಯಿಸಿ ಚಾಕಚಕ್ಯತೆ ಮೆರೆದರು. ಅಂಗವಿಕಲರಿಗೆ ರಸ್ತೆಯಲ್ಲಿ ಸುರಕ್ಷತೆ ಕಲ್ಪಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.