ಮೃತ ಪ್ರಕಾಶ್, ತಿಗಳರಪಾಳ್ಯದ ನಿವಾಸಿ. ಅಪಘಾತದಲ್ಲಿ ಹಾವೇರಿಯ ಸಾಬಣ್ಣ, ಶರಣಪ್ಪ, ಹುಲಿಯಮ್ಮ ಹಾಗೂ ಅಂಬರೀಷ್ ಎಂಬುವರು ಗಾಯಗೊಂಡಿದ್ದಾರೆ. ‘ನೆಲಗೆದರನಹಳ್ಳಿಯಲ್ಲಿ ವಾಸವಿದ್ದ ಶರಣಪ್ಪ ಅವರಿಗೆ ಶುಕ್ರವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಆಗ ಸಂಬಂಧಿಕರು, ಶರಣಪ್ಪರನ್ನು ಪ್ರಕಾಶ್ ಅವರ ಆಟೊದಲ್ಲಿ ಹೆಸರುಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ರಾತ್ರಿ 11.15 ಗಂಟೆ ಸುಮಾರಿಗೆ ಎಂಟನೇ ಮೈಲಿ ಸಿಗ್ನಲ್ನಲ್ಲಿ ಬಲ ತಿರುವು ತೆಗೆದುಕೊಳ್ಳುವಾಗ ಆಟೊಗೆ ಕ್ಯಾಂಟರ್ ಡಿಕ್ಕಿ ಹೊಡೆದಿತ್ತು’ ಎಂದು ಪೀಣ್ಯ ಪೊಲೀಸರು ಹೇಳಿದರು.