ಸೈಬರ್ ಭದ್ರತೆ ಕುರಿತು ವಿಚಾರ ಮಂಡಿಸಿದ ಪೊಲೀಸ್ ಗಣಕ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಣವ ಮೊಹಂತಿ ಅವರಿಗೆ ಪ್ರಥಮ ಬಹುಮಾನ ಬಂದಿದೆ. ರಾಜ್ಯ ಅಪರಾಧ ದಾಖಲಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಚೇತನ್ಕುಮಾರ್, ಎಎಸ್ಐಗಳಾದ ದಿನೇಶ್ ಬಾಬು, ಮುನಿರಾಜ್ ಅವರಿಗೆ ಸಿಸಿಟಿಎಸ್/ಐಸಿಜಿಎಸ್ ಯೋಜನೆ ಜಾರಿಗೊಳಿಸುವಲ್ಲಿ ನೀಡಿದ ಸೇವೆಗೆ ಪ್ರತ್ಯೇಕ ಪ್ರಶಸ್ತಿಗಳು ಲಭಿಸಿವೆ ಎಂದು ಪ್ರಕಟಣೆ ತಿಳಿಸಿದೆ.