'ಬ್ಯಾಂಕೊಂದರ ನಿವೃತ್ತ ಉದ್ಯೋಗಿ ಆಗಿದ್ದ ಉದಯ್, ಪತ್ನಿ ಸುಶೀಲಾ (57) ಜೊತೆ ಲಕ್ಕಸಂದ್ರದಲ್ಲಿ ವಾಸವಿದ್ದರು. ತಮ್ಮ ಬಳಿ ಇದ್ದ ₹ 18 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್ ಮಾರಾಟ ಮಾಡಲು ಮುಂದಾಗಿದ್ದರು. ಅದನ್ನು ತಿಳಿದಿದ್ದ ಮಧು ಹಾಗೂ ಇತರೆ ಆರೋಪಿಗಳು, ಗ್ರಾಹಕರ ಸೋಗಿನಲ್ಲಿ 2014ರ ಮಾರ್ಚ್ 25ರಂದು ಮನೆಗೆ ನುಗ್ಗಿದ್ದರು. ಸುಶೀಲಾ ಮೇಲೆ ಹಲ್ಲೆ ಮಾಡಿ, ಉದಯ್ ಅವರನ್ನು ಕೊಂದಿದ್ದರು. ವಜ್ರದ ನೆಕ್ಲೇಸ್ ಸಮೇತ ಪರಾರಿಯಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.