ಬೆಂಗಳೂರು(ಪ್ರಜಾವಾಣಿ ವಾರ್ತೆ) : ‘ಪ್ರಧಾನಿ ಮೋದಿಯವರ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ. ಬಿಜೆಪಿಯವರು ಅದಾನಿ, ಅಂಬಾನಿಗಳ ವ್ಯವಹಾರದ ಪರವಾಗಿದ್ದಾರೆ. ಹೀಗಾಗಿ ನಂದಿನಿಯನ್ನು ಮೊದಲು ಮುಳುಗಿಸಿ ನಂತರ ಅಮೂಲ್ ಮುಳುಗಿಸುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.