‘ಇದು ಹೊಸ ಸೂಚನೆಯೇನಲ್ಲ, ಈಗಾಗಲೇ ಇರುವ ಸೂಚನೆಯನ್ನು ನಿರ್ದೇಶಕರು ಮತ್ತೆ ನೆನಪಿಸಿದ್ದಾರೆ ಅಷ್ಟೇ. ಮುಚ್ಚುವುದಿದ್ದರೂ, ಮತ್ತೆ ತೆರೆಯುವುದಿದ್ದರೂ ಸರ್ಕಾರದ ಅನುಮತಿ ಪಡೆಯಲೇಬೇಕು. ಒಂದು ಬಾರಿ ಮುಚ್ಚಿದ ಶಾಲೆಯನ್ನು ಮತ್ತೆ ತೆರೆಯುವುದು ಕಷ್ಟಕರವಾಗಬಹುದು, ಇಬ್ಬರೋ, ಮೂವರೋ ವಿದ್ಯಾರ್ಥಿಗಳು ಸೇರ್ಪಡೆಯಾದರೆ ಅಂತಹ ಶಾಲೆಗಳನ್ನು ಮತ್ತೆ ತೆರೆಯುವ ಸಾಧ್ಯತೆ ಇಲ್ಲವೇ ಇಲ್ಲ. ಇದು ಕೇವಲ ಬೆಂಗಳೂರು ಉತ್ತರ ಜಿಲ್ಲೆಗಷ್ಟೇ ಅನ್ವಯವಾಗುವ ವಿಚಾರವಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.