ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷ್‌ ಪ್ರತಿಮೆ ಅನಾವರಣ ಇಂದು

Last Updated 26 ಮಾರ್ಚ್ 2023, 20:21 IST
ಅಕ್ಷರ ಗಾತ್ರ

ಬೆಂಗಳೂರು: ಅಂಬರೀಷ್‌ ರಸ್ತೆ ನಾಮಕರಣ, ಅವರ ಪ್ರತಿಮೆ ಹಾಗೂ ಪ್ರತಿಷ್ಠಾನದ ಉದ್ಘಾಟನೆ ಮಾರ್ಚ್‌ 27ರಂದು ನಡೆಯಲಿದೆ.

ಆನಂದರಾವ್‌ ವೃತ್ತದಿಂದ ಆರ್‌.ಸಿ. ಕಾಲೇಜ್‌ವರೆಗಿನ (ರೇಸ್‌ಕೋರ್ಸ್‌) ರಸ್ತೆಗೆ ಅಂಬರೀಷ್‌ ರಸ್ತೆ ಎಂದು ಹೆಸರಿಸಲಾಗುವುದು. ಸಂಜೆ 5 ಗಂಟೆಗೆ ರೇಸ್‌ಕೋರ್ಸ್‌ ಜಂಕ್ಷನ್‌ನಲ್ಲಿ ಅಂಬರೀಷ್‌ ಅವರ ಪ್ರತಿಮೆ ಅನಾವರಣ ನಡೆಯಲಿದೆ. ಸಂಜೆ 6 ಗಂಟೆಗೆ ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಷ್‌ ಸ್ಮಾರಕ ಹಾಗೂ ಪ್ರತಿಷ್ಠಾನದ ಉದ್ಘಾಟನೆ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಎಂ. ರಾಜೀವ್ ಚಂದ್ರಶೇಖರ್‌, ಸಂಸದರಾದ ಡಿ.ವಿ. ಸದಾನಂದಗೌಡ, ಸುಮಲತಾ ಅಂಬರೀಷ್‌, ಸಚಿವ ಕೆ. ಗೋಪಾಲಯ್ಯ, ಅಂಬರೀಷ್‌ ಪ್ರತಿಷ್ಠಾನದ ಸದಸ್ಯ, ನಟ ಅಭಿಷೇಕ್‌ ಅಂಬರೀಷ್‌ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಮ ಹರೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT