ಬೆಂಗಳೂರು:ನಗರದಲ್ಲಿ ಈಗಾಗಲೇ ಇರುವ 400 ಆಂಬುಲೆನ್ಸ್ ಗಳೊಂದಿಗೆ ಇನ್ನೂ 100 ಆಂಬುಲೆನ್ಸ್ ಸೇರಿಸಿಕೊಳ್ಳಲು ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಸಭೆಯ ಬಳಿಕ ಸಚಿವ ಡಾ.ಸುಧಾಕರ್ ತಿಳಿಸಿದರು.
ಬೆಂಗಳೂರು ಅಂತರರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಮಾಡಲಾದ ಸೌಲಭ್ಯಗಳನ್ನು ಗುರುವಾರ ಮುಖ್ಯಮಂತ್ರಿ ಅವರು ವೀಕ್ಷಿಸಲಿದ್ದಾರೆ. ಕೋವಿಡ್ ಸೋಂಕಿತರಿಗೆ ಎಲ್ಲ ವ್ಯವಸ್ಥೆ ಮನನ ಮಾಡಲಾಗುತ್ತದೆ. ಯಾರೂ ಆತಂಕಗೊಳ್ಳಬಾರದು ಎಂದರು.