ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಕಲಾವಿದರ ಹೆಸರಿನಲ್ಲಿ ನೀಡಲಾಗುವ ಇತರ ದತ್ತಿ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುತ್ತದೆ. ಗಾಯಕಿ ಪ್ರಣತಿ ಗಣಪುರಂ ಅವರಿಗೆ ಡಿ.ಕೆ.ಪಟ್ಟಮ್ಮಾಳ್ ಪುರಸ್ಕಾರ, ವಯಲಿನ್ ವಾದಕ ವಿ.ಎಸ್.ಕೆ.ಚಕ್ರಪಾಣಿ ಅವರಿಗೆ ಪದ್ಮಶ್ರೀ ಡಾ.ಸಿರ್ಕಳಿ ಗೋವಿಂದರಾಜನ್ ಸ್ಮಾರಕ ಪ್ರಶಸ್ತಿ, ಮೃದಂಗವಾದಕ ಬಿ.ಶಿವರಾಮನ್ ಅವರಿಗೆ ಗುರು ಕಾರೈಕುಡಿ ಮಣಿ ಪ್ರಶಸ್ತಿ, ವಯಲಿನ್ ವಾದಕಿಯರು, ಅಯ್ಯರ್ ಸಹೋದರಿಯರಾದ ಡಾ.ಶ್ರೀವಿದ್ಯಾ ಮತ್ತು ಸುಧಾ ಅವರಿಗೆ ಎ.ಜಿ.ಗುರುಸ್ವಾಮಿ ಸ್ಮಾರಕ ಪ್ರಶಸ್ತಿ, ಗಾಯಕಿ ಬಿ.ವಿಜಯಲಕ್ಷ್ಮಿ ಅವರಿಗೆ ರಾಜಂ ವೈದ್ಯನಾಥನ್ ಸಂಗೀತ ಗುರು ಪ್ರಶಸ್ತಿಯನ್ನು ನೀಡಲಾಗುತ್ತದೆ.