ಡಬ್ಲ್ಯುಇಎಫ್ನ ಮುಖ್ಯಸ್ಥ ಭರತ್ ಲಾಲ್ ಮೀನಾ, ‘ಹಲವು ರಾಷ್ಟ್ರ ಮತ್ತು ದೇಶದ ಹಲವು ರಾಜ್ಯಗಳ ತಜ್ಞರು, ಸಂಶೋಧಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಆಯಾ ದೇಶ ಅಥವಾ ರಾಜ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಮತ್ತು ಭವಿಷ್ಯದ ಯೋಜನೆಗಳ ಕುರಿತು ಈ ತಜ್ಞರು ಸಲಹೆ ನೀಡುತ್ತಾರೆ. ಈ ಸಲಹೆ, ಶಿಫಾರಸುಗಳನ್ನು ಕ್ರೋಡೀಕರಿಸಿ, ಸೂಕ್ತವಾದವುಗಳನ್ನು ಪಟ್ಟಿ ಮಾಡಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳುಹಿಸಲಾಗುವುದು’ ಎಂದರು.