ಈ ಕುರಿತಂತೆ ಹೇಳಿಕೆ ನೀಡಿರುವ ಅವರು, ‘ಪ್ರಾಮಾಣಿಕ ಅಧಿಕಾರಿ ಎಂಬಂತೆ ವರ್ತಿಸುತ್ತಿರುವ ರೂಪಾ ಅವರ ಪತಿ ಮನೀಶ್ ಮೌದ್ಗಿಲ್ ಸರ್ವೇ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ರೋಹಿಣಿ ಸಿಂಧೂರಿ ಸೂಚಿಸಿದವರಿಗೆ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ದರಿಂದ, ಈ ಪ್ರಕರಣದಲ್ಲಿ ಮನೀಶ್ ಮೌದ್ಗಿಲ್ ಅವರ ಮೇಲೂ ತನಿಖೆ ನಡೆಯಬೇಕು ಮತ್ತು ಜನರಿಗೆ ಸತ್ಯಾಂಶ ತಿಳಿಯುವಂತಾಗಬೇಕು’ ಎಂದು ಕೋರಿದ್ದಾರೆ.