<p><strong>ಬೆಂಗಳೂರು:</strong> ಎರಡು ದಶಕಗಳಿಂದ ನಗರದ ಕೊಳಗೇರಿಗಳ ಗುಡಿಸಲು, ಶೆಡ್ಗಳಲ್ಲಿ ದಿನದೂಡುತ್ತಿರುವ ನೂರಾರು ಕುಟುಂಬಗಳು ಬೆಚ್ಚನೆಯ ಸೂರೊಂದನ್ನು ಹೊಂದುವ ಸುದಿನ ಹತ್ತಿರವಾಗುತ್ತಿದೆ.</p>.<p>ಕೊಳೆಗೇರಿ ಅಭಿವೃದ್ಧಿ ಮಂಡಳಿಯು ವಸತಿ ಹೀನರಿಗಾಗಿ ಮಾರತ್ತಹಳ್ಳಿಯಲ್ಲಿ ಕಟ್ಟುತ್ತಿರುವ ಸಮುಚ್ಚಯದ ಕಾಮಗಾರಿ ಕೊನೆಯ ಹಂತಕ್ಕೆ ಬಂದಿದೆ. ಫಲಾನುಭವಿಗಳುವಾಸ ಆರಂಭಿಸಲುನವೆಂಬರ್ 10ರೊಳಗೆ ಅನುವು ಮಾಡಿಕೊಡಲು ಮಂಡಳಿಯ ಆಯುಕ್ತರು ತೀರ್ಮಾನಿಸಿದ್ದಾರೆ.</p>.<p>ಚಲ್ಲಘಟ್ಟ, ತಿಪ್ಪಸಂದ್ರದ ಕೃಷ್ಣಪ್ಪ ಗಾರ್ಡನ್, ಪುಲಕೇಶಿನಗರದ ನೆಹರೂ ಕೊಳೆಗೇರಿಗಳ 924 ಕುಟುಂಬಗಳಿಗಾಗಿ ಸಮುಚ್ಚಯ ನಿರ್ಮಾಣ ಮಾಡಲಾಗಿದೆ. ಮನೆಗಳ ಹಂಚಿಕೆಪ್ರಕ್ರಿಯೆ ಮುಗಿದಿದೆ.</p>.<p>ಈ ಯೋಜನೆಗೆ2009ರಲ್ಲಿ ಹಸಿರು ನಿಶಾನೆ ಸಿಕ್ಕರೂ, 2015ರಲ್ಲಿ ನಿರ್ಮಾಣ ಕಾರ್ಯ ಶುರುವಾಗಿತ್ತು. ಕಾಮಗಾರಿಯ ವಿಳಂಬದ ಕುರಿತು ‘ಪ್ರಜಾವಾಣಿ’ಯು ‘ಗೃಹಪ್ರವೇಶಕ್ಕೆ ಕೂಡಿ ಬಾರದ ಮುಹೂರ್ತ!’ ಎಂಬ ಶೀರ್ಷಿಕೆಯ ವರದಿಯನ್ನು ಕಳೆದ ಸೆಪ್ಟೆಂಬರ್ 20ರಂದು ಪ್ರಕಟಿಸಿ ಮಂಡಳಿಯ ಗಮನ ಸೆಳೆದಿತ್ತು.</p>.<p>ಸೌಲಭ್ಯಗಳು:ಸಮುಚ್ಚಯವೂ ಆರು ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಪ್ರತಿ ಮನೆಯೂ 300 ಚದರ ಅಡಿ ವಿಸ್ತೀರ್ಣವಿದೆ. ಅದರಲ್ಲಿಯೇ ಹಾಲ್, ಒಂದು ಬೆಡ್ರೂಮ್, ಅಡುಗೆ ಕೋಣೆ, ಶೌಚಾಲಯ ವ್ಯವಸ್ಥೆ ಇದೆ. </p>.<p>ಆರು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ಒಳಚರಂಡಿ ಕಾಮಗಾರಿ ಸದ್ಯ ಮುಗಿದಿದೆ. ವಿದ್ಯುತ್ ಸಂಪರ್ಕದ ಕೆಲಸವೂ ಬಹುತೇಕ ಪೂರ್ಣಗೊಂಡಿದೆ. ಇದಕ್ಕಾಗಿ 11 ಕೆ.ವಿ.ವಾಟ್ನ ಟ್ರಾನ್ಸ್ಫಾರ್ಮರ್ಗಳನ್ನು ಜೋಡಿಸಲಾಗಿದೆ.</p>.<p>ನೀರಿನ ವ್ಯವಸ್ಥೆಗಾಗಿ ಮೂರು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ನಾಲ್ಕು ಸಂಪ್ಗಳನ್ನು ಕಟ್ಟಲಾಗಿದೆ. ಇಲ್ಲಿಂದ ನೀರು ಪಂಪ್ ಆಗಿ ಒವರ್ ಹೆಡ್ ಟ್ಯಾಂಕ್ಗಳಲ್ಲಿ ಶೇಖರಣೆ ಆಗಲಿದೆ. ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಸರಬರಾಜಿಗೆ ಕೊಳವೆಗಳನ್ನು ಜೋಡಿಸಲಾಗಿದೆ.</p>.<p>ನಿವಾಸಿಗಳ ಸಭೆ, ಸಮಾರಂಭಗಳ ಆಚರಣೆಗಾಗಿ ಎರಡು ಅಂತಸ್ತಿನ ಸಭಾಭವನ ಕಟ್ಟಲಾಗುತ್ತಿದೆ. ಅದರ ಮುಂಭಾಗದಲ್ಲೇ ಮಕ್ಕಳ ಉದ್ಯಾನ ನಿರ್ಮಾಣಕ್ಕೆ ಜಾಗ ಮೀಸಲಿರಿಸಲಾಗಿದೆ. ಜನರಲ್ ಸ್ಟೋರ್, ಮೆಡಿಕಲ್ ಸ್ಟೋರ್, ಹಣ್ಣು–ತರಕಾರಿ ಅಂಗಡಿಗಳಿಗಾಗಿ ಮಳಿಗೆಗಳನ್ನು ರೂಪಿಸಲಾಗಿದೆ.</p>.<p>‘ಮಳೆನೀರಿನ ಹರಿವಿಗೆಸದ್ಯಕ್ಕೆ ಕಾಲುವೆಗಳನ್ನು ಕಟ್ಟಲಾಗಿದೆ. ಮುಂದಿನ ದಿನಗಳಲ್ಲಿ ಮಳೆನೀರಿನ ಸಂಗ್ರಹ ವ್ಯವಸ್ಥೆ ಮಾಡುತ್ತೇವೆ’ ಎಂದು ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಪ್ಪ<br />ತಿಳಿಸಿದರು.</p>.<p>ಸಮುಚ್ಚಯವನ್ನು ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಶೇ 50 ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ನೀಡಿವೆ.</p>.<p><strong>₹ 50 ಸಾವಿರ ವಂತಿಗೆ</strong></p>.<p>‘ಕಟ್ಟಿದ ಮನೆಯೊಂದರ ವೆಚ್ಚದ ಶೇ 10ರಷ್ಟು ಮೊತ್ತವನ್ನು ಫಲಾನುಭವಿಗಳು ವಂತಿಕೆಯಾಗಿ ಮಂಡಳಿಗೆ ಪಾವತಿಸಬೇಕು. ಆರ್ಥಿಕವಾಗಿ ಸ್ವಲ್ಪ ಸಬಲರಾದವರಿಂದ ಮಾತ್ರ ವಂತಿಕೆ ಪಡೆದು ಮನೆಗಳನ್ನು ವಾಸಕ್ಕೆ ನೀಡುತ್ತೇವೆ. ಈ ಮೊತ್ತವನ್ನೂ ಪಾವತಿಸಲು ಶಕ್ತರಿಲ್ಲದ ಫಲಾನುಭವಿಗಳಿಗೆ ನೆರವಾಗಲು ಬಿಬಿಎಂಪಿ ₹ 85 ಲಕ್ಷ ನೀಡಲು ಮುಂದಾಗಿದೆ’ ಎಂದು ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪದ್ಮನಾಭ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಅಂಕಿ–ಅಂಶ</strong></p>.<p>* 924 - ಸಮುಚ್ಚಯದಲ್ಲಿನ ಒಟ್ಟು ಮನೆಗಳು</p>.<p>* ₹35 ಕೋಟಿ - ಯೋಜನೆಯ ಒಟ್ಟು ವೆಚ್ಚ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎರಡು ದಶಕಗಳಿಂದ ನಗರದ ಕೊಳಗೇರಿಗಳ ಗುಡಿಸಲು, ಶೆಡ್ಗಳಲ್ಲಿ ದಿನದೂಡುತ್ತಿರುವ ನೂರಾರು ಕುಟುಂಬಗಳು ಬೆಚ್ಚನೆಯ ಸೂರೊಂದನ್ನು ಹೊಂದುವ ಸುದಿನ ಹತ್ತಿರವಾಗುತ್ತಿದೆ.</p>.<p>ಕೊಳೆಗೇರಿ ಅಭಿವೃದ್ಧಿ ಮಂಡಳಿಯು ವಸತಿ ಹೀನರಿಗಾಗಿ ಮಾರತ್ತಹಳ್ಳಿಯಲ್ಲಿ ಕಟ್ಟುತ್ತಿರುವ ಸಮುಚ್ಚಯದ ಕಾಮಗಾರಿ ಕೊನೆಯ ಹಂತಕ್ಕೆ ಬಂದಿದೆ. ಫಲಾನುಭವಿಗಳುವಾಸ ಆರಂಭಿಸಲುನವೆಂಬರ್ 10ರೊಳಗೆ ಅನುವು ಮಾಡಿಕೊಡಲು ಮಂಡಳಿಯ ಆಯುಕ್ತರು ತೀರ್ಮಾನಿಸಿದ್ದಾರೆ.</p>.<p>ಚಲ್ಲಘಟ್ಟ, ತಿಪ್ಪಸಂದ್ರದ ಕೃಷ್ಣಪ್ಪ ಗಾರ್ಡನ್, ಪುಲಕೇಶಿನಗರದ ನೆಹರೂ ಕೊಳೆಗೇರಿಗಳ 924 ಕುಟುಂಬಗಳಿಗಾಗಿ ಸಮುಚ್ಚಯ ನಿರ್ಮಾಣ ಮಾಡಲಾಗಿದೆ. ಮನೆಗಳ ಹಂಚಿಕೆಪ್ರಕ್ರಿಯೆ ಮುಗಿದಿದೆ.</p>.<p>ಈ ಯೋಜನೆಗೆ2009ರಲ್ಲಿ ಹಸಿರು ನಿಶಾನೆ ಸಿಕ್ಕರೂ, 2015ರಲ್ಲಿ ನಿರ್ಮಾಣ ಕಾರ್ಯ ಶುರುವಾಗಿತ್ತು. ಕಾಮಗಾರಿಯ ವಿಳಂಬದ ಕುರಿತು ‘ಪ್ರಜಾವಾಣಿ’ಯು ‘ಗೃಹಪ್ರವೇಶಕ್ಕೆ ಕೂಡಿ ಬಾರದ ಮುಹೂರ್ತ!’ ಎಂಬ ಶೀರ್ಷಿಕೆಯ ವರದಿಯನ್ನು ಕಳೆದ ಸೆಪ್ಟೆಂಬರ್ 20ರಂದು ಪ್ರಕಟಿಸಿ ಮಂಡಳಿಯ ಗಮನ ಸೆಳೆದಿತ್ತು.</p>.<p>ಸೌಲಭ್ಯಗಳು:ಸಮುಚ್ಚಯವೂ ಆರು ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಪ್ರತಿ ಮನೆಯೂ 300 ಚದರ ಅಡಿ ವಿಸ್ತೀರ್ಣವಿದೆ. ಅದರಲ್ಲಿಯೇ ಹಾಲ್, ಒಂದು ಬೆಡ್ರೂಮ್, ಅಡುಗೆ ಕೋಣೆ, ಶೌಚಾಲಯ ವ್ಯವಸ್ಥೆ ಇದೆ. </p>.<p>ಆರು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ಒಳಚರಂಡಿ ಕಾಮಗಾರಿ ಸದ್ಯ ಮುಗಿದಿದೆ. ವಿದ್ಯುತ್ ಸಂಪರ್ಕದ ಕೆಲಸವೂ ಬಹುತೇಕ ಪೂರ್ಣಗೊಂಡಿದೆ. ಇದಕ್ಕಾಗಿ 11 ಕೆ.ವಿ.ವಾಟ್ನ ಟ್ರಾನ್ಸ್ಫಾರ್ಮರ್ಗಳನ್ನು ಜೋಡಿಸಲಾಗಿದೆ.</p>.<p>ನೀರಿನ ವ್ಯವಸ್ಥೆಗಾಗಿ ಮೂರು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ನಾಲ್ಕು ಸಂಪ್ಗಳನ್ನು ಕಟ್ಟಲಾಗಿದೆ. ಇಲ್ಲಿಂದ ನೀರು ಪಂಪ್ ಆಗಿ ಒವರ್ ಹೆಡ್ ಟ್ಯಾಂಕ್ಗಳಲ್ಲಿ ಶೇಖರಣೆ ಆಗಲಿದೆ. ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಸರಬರಾಜಿಗೆ ಕೊಳವೆಗಳನ್ನು ಜೋಡಿಸಲಾಗಿದೆ.</p>.<p>ನಿವಾಸಿಗಳ ಸಭೆ, ಸಮಾರಂಭಗಳ ಆಚರಣೆಗಾಗಿ ಎರಡು ಅಂತಸ್ತಿನ ಸಭಾಭವನ ಕಟ್ಟಲಾಗುತ್ತಿದೆ. ಅದರ ಮುಂಭಾಗದಲ್ಲೇ ಮಕ್ಕಳ ಉದ್ಯಾನ ನಿರ್ಮಾಣಕ್ಕೆ ಜಾಗ ಮೀಸಲಿರಿಸಲಾಗಿದೆ. ಜನರಲ್ ಸ್ಟೋರ್, ಮೆಡಿಕಲ್ ಸ್ಟೋರ್, ಹಣ್ಣು–ತರಕಾರಿ ಅಂಗಡಿಗಳಿಗಾಗಿ ಮಳಿಗೆಗಳನ್ನು ರೂಪಿಸಲಾಗಿದೆ.</p>.<p>‘ಮಳೆನೀರಿನ ಹರಿವಿಗೆಸದ್ಯಕ್ಕೆ ಕಾಲುವೆಗಳನ್ನು ಕಟ್ಟಲಾಗಿದೆ. ಮುಂದಿನ ದಿನಗಳಲ್ಲಿ ಮಳೆನೀರಿನ ಸಂಗ್ರಹ ವ್ಯವಸ್ಥೆ ಮಾಡುತ್ತೇವೆ’ ಎಂದು ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಪ್ಪ<br />ತಿಳಿಸಿದರು.</p>.<p>ಸಮುಚ್ಚಯವನ್ನು ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಶೇ 50 ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ನೀಡಿವೆ.</p>.<p><strong>₹ 50 ಸಾವಿರ ವಂತಿಗೆ</strong></p>.<p>‘ಕಟ್ಟಿದ ಮನೆಯೊಂದರ ವೆಚ್ಚದ ಶೇ 10ರಷ್ಟು ಮೊತ್ತವನ್ನು ಫಲಾನುಭವಿಗಳು ವಂತಿಕೆಯಾಗಿ ಮಂಡಳಿಗೆ ಪಾವತಿಸಬೇಕು. ಆರ್ಥಿಕವಾಗಿ ಸ್ವಲ್ಪ ಸಬಲರಾದವರಿಂದ ಮಾತ್ರ ವಂತಿಕೆ ಪಡೆದು ಮನೆಗಳನ್ನು ವಾಸಕ್ಕೆ ನೀಡುತ್ತೇವೆ. ಈ ಮೊತ್ತವನ್ನೂ ಪಾವತಿಸಲು ಶಕ್ತರಿಲ್ಲದ ಫಲಾನುಭವಿಗಳಿಗೆ ನೆರವಾಗಲು ಬಿಬಿಎಂಪಿ ₹ 85 ಲಕ್ಷ ನೀಡಲು ಮುಂದಾಗಿದೆ’ ಎಂದು ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪದ್ಮನಾಭ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಅಂಕಿ–ಅಂಶ</strong></p>.<p>* 924 - ಸಮುಚ್ಚಯದಲ್ಲಿನ ಒಟ್ಟು ಮನೆಗಳು</p>.<p>* ₹35 ಕೋಟಿ - ಯೋಜನೆಯ ಒಟ್ಟು ವೆಚ್ಚ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>