<p><strong>ಕೆ.ಆರ್.ಪುರ:</strong> ಚಿಕ್ಕಬನಹಳ್ಳಿ ಗ್ರಾಮದ ಹಲವು ಸರ್ಕಾರಿ ಸರ್ವೆ ನಂಬರ್ಗಳ ಜಮೀನುಗಳಲ್ಲಿ ಹಾದು ಹೋಗುವ ರಾಜಕಾಲುವೆ, ಬಂಡಿದಾರಿಗಳ ಪಥ ಬದಲಾವಣೆಗೆ ಅವಕಾಶ ನೀಡಬಾರದೆಂದು ಜೈ ಭೀಮ್ ಕರ್ನಾಟಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಅಣ್ಣಯ್ಯ ಅವರು ಪೂರ್ವ ತಾಲ್ಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.</p>.<p>‘ಬಿದರಹಳ್ಳಿ ಹೋಬಳಿ ಚಿಕ್ಕಬನಹಳ್ಳಿ ಹಲವು ಸರ್ವೆ ನಂಬರ್ಗಳಿಗೆ ಸೇರಿದ ಜಮೀನುಗಳಲ್ಲಿರುವ ರಾಜಕಾಲುವೆ, ಬಂಡಿದಾರಿಯನ್ನು ಸ್ಟರ್ಲಿಂಗ್ ಅರ್ಬನ್ ಇನ್-ಫ್ರಾ ಪ್ರಾಜೆಕ್ಟ್ ಮತ್ತು ಗೋಪಾಲನ್, ಪ್ರೆಸ್ಟೀಜ್ ಪ್ರಾಜೆಕ್ಟ್ ಅವರು ಪಥ ಬದಲಾವಣೆಗೆ ಕಚೇರಿಗೆ ಮಾಡಿರುವ ಮನವಿಯನ್ನು ತಿರಸ್ಕರಿಸಬೇಕು’ ಎಂದರು.</p>.<p>‘ಹಗದೂರು, ಸೋರಹುಣಸಿ ಗ್ರಾಮ, ಶೀಗೇಹಳ್ಳಿ, ಗುಂಜೂರು, ವೈಟ್ಫೀಲ್ಡ್ ಮತ್ತು ಪಟ್ಟಂದೂರು ಅಗ್ರಹಾರ ಗ್ರಾಮಗಳಲ್ಲಿ ಹಲವಾರು ರಸ್ತೆಗಳು, ರಾಜಕಾಲುವೆಗಳು, ಗೋಮಾಳ, ಗುಂಡು ತೋಪುಗಳನ್ನು ಈ ಹಿಂದೆಯೇ ಹಲವರು ಒತ್ತುವರಿ ಮಾಡಿಕೊಂಡಿದಿದ್ದಾರೆ. ಈ ಪಥ ಬದಲಾವಣೆಗೆ ಅವಕಾಶ ಮಾಡಿಕೊಡಬಾರದು. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನೋಂದಣಿಗೂ ತಡೆ ನೀಡಬೇಕು. ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನೂ ಕಲ್ಪಿಸಬಾರದು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ಚಿಕ್ಕಬನಹಳ್ಳಿ ಗ್ರಾಮದ ಹಲವು ಸರ್ಕಾರಿ ಸರ್ವೆ ನಂಬರ್ಗಳ ಜಮೀನುಗಳಲ್ಲಿ ಹಾದು ಹೋಗುವ ರಾಜಕಾಲುವೆ, ಬಂಡಿದಾರಿಗಳ ಪಥ ಬದಲಾವಣೆಗೆ ಅವಕಾಶ ನೀಡಬಾರದೆಂದು ಜೈ ಭೀಮ್ ಕರ್ನಾಟಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಅಣ್ಣಯ್ಯ ಅವರು ಪೂರ್ವ ತಾಲ್ಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.</p>.<p>‘ಬಿದರಹಳ್ಳಿ ಹೋಬಳಿ ಚಿಕ್ಕಬನಹಳ್ಳಿ ಹಲವು ಸರ್ವೆ ನಂಬರ್ಗಳಿಗೆ ಸೇರಿದ ಜಮೀನುಗಳಲ್ಲಿರುವ ರಾಜಕಾಲುವೆ, ಬಂಡಿದಾರಿಯನ್ನು ಸ್ಟರ್ಲಿಂಗ್ ಅರ್ಬನ್ ಇನ್-ಫ್ರಾ ಪ್ರಾಜೆಕ್ಟ್ ಮತ್ತು ಗೋಪಾಲನ್, ಪ್ರೆಸ್ಟೀಜ್ ಪ್ರಾಜೆಕ್ಟ್ ಅವರು ಪಥ ಬದಲಾವಣೆಗೆ ಕಚೇರಿಗೆ ಮಾಡಿರುವ ಮನವಿಯನ್ನು ತಿರಸ್ಕರಿಸಬೇಕು’ ಎಂದರು.</p>.<p>‘ಹಗದೂರು, ಸೋರಹುಣಸಿ ಗ್ರಾಮ, ಶೀಗೇಹಳ್ಳಿ, ಗುಂಜೂರು, ವೈಟ್ಫೀಲ್ಡ್ ಮತ್ತು ಪಟ್ಟಂದೂರು ಅಗ್ರಹಾರ ಗ್ರಾಮಗಳಲ್ಲಿ ಹಲವಾರು ರಸ್ತೆಗಳು, ರಾಜಕಾಲುವೆಗಳು, ಗೋಮಾಳ, ಗುಂಡು ತೋಪುಗಳನ್ನು ಈ ಹಿಂದೆಯೇ ಹಲವರು ಒತ್ತುವರಿ ಮಾಡಿಕೊಂಡಿದಿದ್ದಾರೆ. ಈ ಪಥ ಬದಲಾವಣೆಗೆ ಅವಕಾಶ ಮಾಡಿಕೊಡಬಾರದು. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನೋಂದಣಿಗೂ ತಡೆ ನೀಡಬೇಕು. ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನೂ ಕಲ್ಪಿಸಬಾರದು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>