ಬಸವಣ್ಣನವರ 400 ವಚನಗಳು ಅಧ್ಯಾತ್ಮದ, ಅನುಭವದ ಕಣಜಗಳಾಗಿವೆ. ಅಲ್ಲಮ ಪ್ರಭುಗಳು ಬಯಲನ್ನೇ ಮುಕ್ತಿಯ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ. ಪರಮಾತ್ಮನನ್ನು ಜಗದಗಲ, ಮುಗಿಲಗಲ ಎನ್ನುವ ಮೂಲಕ ದೇವರ ಆಳ, ಅಗಲ ಅಳೆಯಲು ಸಾಧ್ಯವಿಲ್ಲ. ಬದುಕೇ ಬಯಲು ಎಂದು ಪ್ರತಿಪಾದಿಸಿದ್ದಾರೆ. ನುಡಿದಂತೆ ನಡೆಯುವುದಕ್ಕೆ ನಡೆದಂತೆ ನುಡಿಯುವುದಕ್ಕೆ ಒತ್ತು ನೀಡಿದ್ದಾರೆ. ಆಡಂಬರವಿಲ್ಲದ ದೈವ ನಂಬಿದ
ಅಕ್ಕಮಹಾದೇವಿಯಂತಹವರನ್ನು ವಿಶ್ವದ ಎಲ್ಲೂ ಕಾಣಲು ಸಾಧ್ಯವಿಲ್ಲ. ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು
ಹೇಳಿದರು.