‘ಭಾನುವಾರವೂ ಧ್ವನಿವರ್ಧಕದಲ್ಲಿ ಗೀತೆಗಳನ್ನು ಹಾಕಿದ್ದರು. ಸಂಜೆ 6.25ರ ಸುಮಾರಿಗೆ ಮಳಿಗೆಗೆ ಬಂದಿದ್ದ ಆರೋಪಿಗಳು, ‘ಧ್ವನಿವರ್ಧಕದ ಶಬ್ದವನ್ನು ಏಕೆ ಹೆಚ್ಚು ಮಾಡಿದ್ದಿಯಾ, ನಮಗೆ ತೊಂದರೆಯಾಗುತ್ತಿದೆ’ ಎಂದು ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಆರೋಪಿಯೊಬ್ಬ, ಮುಖೇಶ್ ಮೇಲೆ ಹಲ್ಲೆ ಮಾಡಿದ್ದ. ನಂತರ, ಎಲ್ಲ ಆರೋಪಿಗಳು ಸೇರಿ ಮುಖೇಶ್ ಅವರನ್ನು ಮಳಿಗೆಯಿಂದ ಹೊರಗೆ ಎಳೆದು ರಸ್ತೆಯಲ್ಲಿ ಥಳಿಸಿದ್ದರು.’