ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಕದ್ದಾಲಿಕೆ; ಎಸಿಪಿ ವಿಚಾರಣೆ

Last Updated 24 ಜೂನ್ 2021, 21:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಬೆಲ್ಲದ ಕರೆ ಕದ್ದಾಲಿಕೆ ಪ್ರಕರಣದ ವಿಚಾರಣೆಯನ್ನು ಶೇಷಾದ್ರಿಪುರ ಉಪವಿಭಾಗದ ಎಸಿಪಿ ಎಂ.ಜೆ. ಪೃಥ್ವಿ ನೇತೃತ್ವದ ತಂಡ ಕೈಗೆತ್ತಿಕೊಂಡಿದ್ದು, ಗುರುವಾರ ಹಲವೆಡೆ ಸಂಚರಿಸಿ ಮಾಹಿತಿ ಕಲೆಹಾಕಿತು.

ಆರೋಪದ ಬಗ್ಗೆ ಕೆಲ ಪೂರಕ ಮಾಹಿತಿ ಒದಗಿಸುವಂತೆ ಅರವಿಂದ ಬೆಲ್ಲದ ಅವರಿಗೆ ತಂಡ ತಿಳಿಸಿತ್ತು. ಆದರೆ, ತಂಡದ ಎದುರು ಬೆಲ್ಲದ ಗುರುವಾರ ಹಾಜರಾಗಲಿಲ್ಲ. ಶುಕ್ರವಾರ ಹಾಜರಾಗುವ ಸಾಧ್ಯತೆ ಇದೆ.

‘ಅರವಿಂದ ಬೆಲ್ಲದ ನೀಡಿರುವ ದೂರಿನಲ್ಲಿರುವ ಸಂಗತಿಗಳಲ್ಲಿ ಕೆಲ ಗೊಂದಲಗಳು ಸೃಷ್ಟಿಯಾಗಿವೆ. ಈ ಬಗ್ಗೆ ಬೆಲ್ಲದ ಅವರ ಪ್ರತಿಕ್ರಿಯೆ ಪಡೆಯಬೇಕಾಗಿದೆ. ಸದ್ಯಕ್ಕೆ ಅವರು ಲಭ್ಯವಾಗಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT