‘ಅನುಪಮಾ ಅವರ ‘ಹೆಣ್ಣು ಹೆಜ್ಜೆ’ (ವಿಚಾರ ಸಾಹಿತ್ಯ), ಬಸವರಾಜ ಅವರ ‘ಬಯಲ ಬೆಳಕು’ (ವಿಮರ್ಶೆ) ಹಾಗೂ ಮಂಜುನಾಥ್ ಅವರ ‘ಕಾಡ ಸೆರಗಿನ ಸೂಡಿ’ (ಕಾದಂಬರಿ) ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ’ ಎಂದು ಪ್ರಕಟಣೆ ತಿಳಿಸಿದೆ. ಇದೇ 12ರಂದು ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಪ್ರಶಸ್ತಿಯು ತಲಾ ₹10 ಸಾವಿರ ಮೊತ್ತ ಹಾಗೂ ಫಲಕವನ್ನು ಒಳಗೊಂಡಿದೆ.