<p><strong>ಬೆಂಗಳೂರು</strong>: ‘ನಾಟಕ ಬೆಂಗ್ಳೂರು‘ 16ನೇ ರಂಗಸಂಭ್ರಮದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ರಚನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿ ನಾಟಕ ಸೇರಿದಂತೆ ಒಂಬತ್ತು ನಾಟಕಗಳ ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿವೆ.</p>.<p>ರವೀಂದ್ರ ಕಲಾಕ್ಷೇತ್ರಕ್ಕೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ‘ಕಲಾಕ್ಷೇತ್ರ 60’ ವಜ್ರಮಹೋತ್ಸವದ ನೆನಪನ್ನು ಹಸಿರಾಗಿಡಲು ಈ ನಾಟಕ ರಚನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ಒಟ್ಟು 40 ನಾಟಕಗಳ ಕೃತಿಗಳು ಬಂದಿದ್ದವು. ಅದರಲ್ಲಿ ಎರಡು ವಿದ್ಯಾರ್ಥಿ ನಾಟಕಗಳು.</p>.<p>ಬಹುಮಾನಕ್ಕೆ ಆಯ್ಕೆಯಾಗಿರುವ ನಾಟಕಗಳು ಹೀಗಿವೆ; 1) ಸುಮ್ಮನಿರು ಡಯೋಜಿನೆಸ್ – ಎನ್.ಸಿ.ಮಹೇಶ್ 2) ಚಿನಿವಾರನ ಮಗಳು – ಉಷಾ ನರಸಿಂಹನ್ 3)ಸನಿಮಾತ್ಮೆ – ಸಂತೋಷ್ ಗುಡ್ಡಿಯಂಗಡಿ 4)ಕಿಂಡ್ಸುಗಿ – ಚಂದನಾ ನಾಗ್, 5) ಯಾನ – ಕೃಷ್ಣ ಜನಮನ 6) ಎಮ್ಮಯ ಕೂಸ ಕಂಡಿರಾ– ಅನುಪಮಾ ಪ್ರಸಾದ್, 7) ಶೇಷಗ್ರಸ್ತರು – ರಮೇಶ್ ಚಂದ್ ಎಚ್.ಸಿ. 8) ಹದ್ದು ಮೀರಿತೆ ಹಾದಿ – ಭದ್ರಪ್ಪ ಶಿ. ಹೆನ್ಲಿ 9) ಯಾಜ್ಞಸೇನಿಯ ಆತ್ಮಕಥನ – ವಿಜಯಲಕ್ಷ್ಮಿ (ವಿದ್ಯಾರ್ಥಿ ವಿಭಾಗ).</p>.<p>ಬಹುಮಾನಕ್ಕೆ ಆಯ್ಕೆಯಾದ ಮೂರು ನಾಟಕಗಳಿಗೆ ತಲಾ ₹ 10 ಸಾವಿರ, ಉಳಿದ ಆರು ನಾಟಕಗಳಿಗೆ ತಲಾ ₹ 5 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ.</p>.<p>ಬೆಂಗಳೂರಿನ ಕಲಾಗಂಗೋತ್ರಿ ರಂಗತಂಡ ನಗದು ಬಹುಮಾನವನ್ನು ಪ್ರಾಯೋಜಿಸಿದೆ. ಬೆಂಗಳೂರಿನ ಭಾಗವತರು ಸಾಂಸ್ಕೃತಿಕ ಸಂಘಟನೆ ನಾಟಕಗಳನ್ನು ಪ್ರಕಟಿಸುತ್ತಿದೆ. </p>.<p>ಮಂಗಳವಾರ ಸಂಜೆ 6.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ‘ರವೀಂದ್ರ ಕಲಾಕ್ಷೇತ್ರ–60’ ವಜ್ರಮಹೋತ್ಸವ ಸಂಭ್ರಮ ಸಮಾರೋಪ ಸಮಾರಂಭ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತಿದೆ ಎಂದು ನಾಟಕ ಬೆಂಗ್ಳೂರು, ಸಂಚಾಲನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನಾಟಕ ಬೆಂಗ್ಳೂರು‘ 16ನೇ ರಂಗಸಂಭ್ರಮದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ರಚನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿ ನಾಟಕ ಸೇರಿದಂತೆ ಒಂಬತ್ತು ನಾಟಕಗಳ ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿವೆ.</p>.<p>ರವೀಂದ್ರ ಕಲಾಕ್ಷೇತ್ರಕ್ಕೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ‘ಕಲಾಕ್ಷೇತ್ರ 60’ ವಜ್ರಮಹೋತ್ಸವದ ನೆನಪನ್ನು ಹಸಿರಾಗಿಡಲು ಈ ನಾಟಕ ರಚನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ಒಟ್ಟು 40 ನಾಟಕಗಳ ಕೃತಿಗಳು ಬಂದಿದ್ದವು. ಅದರಲ್ಲಿ ಎರಡು ವಿದ್ಯಾರ್ಥಿ ನಾಟಕಗಳು.</p>.<p>ಬಹುಮಾನಕ್ಕೆ ಆಯ್ಕೆಯಾಗಿರುವ ನಾಟಕಗಳು ಹೀಗಿವೆ; 1) ಸುಮ್ಮನಿರು ಡಯೋಜಿನೆಸ್ – ಎನ್.ಸಿ.ಮಹೇಶ್ 2) ಚಿನಿವಾರನ ಮಗಳು – ಉಷಾ ನರಸಿಂಹನ್ 3)ಸನಿಮಾತ್ಮೆ – ಸಂತೋಷ್ ಗುಡ್ಡಿಯಂಗಡಿ 4)ಕಿಂಡ್ಸುಗಿ – ಚಂದನಾ ನಾಗ್, 5) ಯಾನ – ಕೃಷ್ಣ ಜನಮನ 6) ಎಮ್ಮಯ ಕೂಸ ಕಂಡಿರಾ– ಅನುಪಮಾ ಪ್ರಸಾದ್, 7) ಶೇಷಗ್ರಸ್ತರು – ರಮೇಶ್ ಚಂದ್ ಎಚ್.ಸಿ. 8) ಹದ್ದು ಮೀರಿತೆ ಹಾದಿ – ಭದ್ರಪ್ಪ ಶಿ. ಹೆನ್ಲಿ 9) ಯಾಜ್ಞಸೇನಿಯ ಆತ್ಮಕಥನ – ವಿಜಯಲಕ್ಷ್ಮಿ (ವಿದ್ಯಾರ್ಥಿ ವಿಭಾಗ).</p>.<p>ಬಹುಮಾನಕ್ಕೆ ಆಯ್ಕೆಯಾದ ಮೂರು ನಾಟಕಗಳಿಗೆ ತಲಾ ₹ 10 ಸಾವಿರ, ಉಳಿದ ಆರು ನಾಟಕಗಳಿಗೆ ತಲಾ ₹ 5 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ.</p>.<p>ಬೆಂಗಳೂರಿನ ಕಲಾಗಂಗೋತ್ರಿ ರಂಗತಂಡ ನಗದು ಬಹುಮಾನವನ್ನು ಪ್ರಾಯೋಜಿಸಿದೆ. ಬೆಂಗಳೂರಿನ ಭಾಗವತರು ಸಾಂಸ್ಕೃತಿಕ ಸಂಘಟನೆ ನಾಟಕಗಳನ್ನು ಪ್ರಕಟಿಸುತ್ತಿದೆ. </p>.<p>ಮಂಗಳವಾರ ಸಂಜೆ 6.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ‘ರವೀಂದ್ರ ಕಲಾಕ್ಷೇತ್ರ–60’ ವಜ್ರಮಹೋತ್ಸವ ಸಂಭ್ರಮ ಸಮಾರೋಪ ಸಮಾರಂಭ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತಿದೆ ಎಂದು ನಾಟಕ ಬೆಂಗ್ಳೂರು, ಸಂಚಾಲನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>