ನಗರವನ್ನು ಸುಂದರವಾಗಿಡಬೇಕೆಂಬ ನೈತಿಕ ಜವಾಬ್ದಾರಿ ಜನರಲ್ಲೇ ಮೂಡಬೇಕು. ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿರುವ ವಲಸಿಗರಲ್ಲೂ ಇದು ನನ್ನ ಊರು ಎಂಬ ಭಾವನೆ ಮೂಡಬೇಕು. ಆಗ ಮಾತ್ರ ತ್ಯಾಜ್ಯ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದು ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಉಪನಿರ್ದೇಶಕಿ ಡಾ.ಟಿ.ಸಿ ಪೂರ್ಣಿಮಾ ತಿಳಿಸಿದರು. ಪುನರ್ ಬಳಕೆ ಹಾಗೂ ಮರುಬಳಕೆ ಪದ್ಧತಿಯಿಂದ ಕಸದ ಸಮಸ್ಯೆಗೆ ಕೊಂಚ ಮಟ್ಟಿಗೆ ಇತಿಶ್ರೀ ಹಾಡಬಹುದು ಎಂದು ಹೇಳಿದರು.