ತಮಿಳುನಾಡಿನ ಶಿವಕುಮಾರ್, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಸರ್ಜಾಪುರದಲ್ಲಿ ವಾಸವಿದ್ದ. ನಾಗಸಂದ್ರದ ಎಂಇಐ ಲೇಔಟ್ನಲ್ಲಿ ಟ್ರಾವೆಲ್ಸ್ ಕಚೇರಿ ತೆರೆದಿದ್ದ. ಆತನ ವಿರುದ್ಧ ಕಾರುಗಳ ಮಾಲೀಕರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಎಚ್.ಬಿ. ಸುನೀಲ್ ನೇತೃತ್ವದ ತಂಡ ತನಿಖೆ ಆರಂಭಿಸಿದೆ.