ಮಾರುತಿಸೇವಾನಗರ, ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಬೈಯಪ್ಪನಹಳ್ಳಿಯನ್ನು ಈ ಮೇಲ್ಸೇತುವೆ ಸಂಪರ್ಕಿಸಲಿದೆ. ರೈಲ್ವೆ ಮೇಲ್ಸೇತುವೆ ಇಲ್ಲಿದ್ದು, ಇದನ್ನು ನೆಲಸಮಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಭೂಸ್ವಾಧೀನಕ್ಕೆ ಪ್ರತ್ಯೇಕವಾಗಿ ₹68 ಕೋಟಿ ಅಂದಾಜು ಮಾಡಲಾಗಿದೆ. ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ನೈರುತ್ಯ ರೈಲ್ವೆ ಮತ್ತು ಸಬ್ಅರ್ಬನ್ ರೈಲ್ವೆ ಪ್ರಾಧಿಕಾರ (ಕೆ–ರೈಡ್) ನಿರಾಕ್ಷೇಪಣಾ ಪತ್ರ ನೀಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.