‘ಹಬ್ಬಕ್ಕಾಗಿ ಕುರಿಗಳನ್ನು ಖರೀದಿಸಲು ಸಾವಿರಾರು ಜನರು ಮಾರುಕಟ್ಟೆಗೆ ಹೋಗುತ್ತಾರೆ. ಈ ವೇಳೆ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೆ, ಮಾಂಸ ಪಡೆಯಲು ಹಲವು ಕಡೆಯಿಂದ ನೂರಾರು ಜನರು ಬರುತ್ತಾರೆ. ಈ ವೇಳೆ ಸೋಂಕು ಮತ್ತಷ್ಟು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಕುರಿಗಳನ್ನು ಖರೀದಿಸಿ, ಮಾಂಸ ದಾನ ಮಾಡುವ ಬದಲು, ಸೇವಾ ಕಾರ್ಯ ನಡೆಸುವುದಕ್ಕೆ ಹಣ ನೀಡುವ ಮೂಲಕ ಹಬ್ಬ ಆಚರಿಸಬೇಕು’ ಎಂದು ಅವರು ಹೇಳಿದ್ದಾರೆ.