ಬಕ್ರೀದ್ ದಿನ ಪ್ರಾಣಿಗಳ ಶೇಖರಣೆ ಮತ್ತು ಸಾಗಣೆಗೆ ಅವಕಾಶ ನೀಡಬಾರದು. ರಾಜ್ಯದಲ್ಲಿ ಎಲ್ಲ ಪ್ರಾಣಿಗಳ ಬಲಿಯನ್ನು ನಿಷೇಧಿಸಿ ‘ಕರ್ನಾಟಕ ಬಲಿ ನಿಷೇಧ ಕಾಯಿದೆ 1959’ ರಿಂದ ಜಾರಿಯಲ್ಲಿದೆ. ಈ ಕಾನೂನು 1959 ರಲ್ಲಿ ಹಿಂದುಗಳಿಗೆ ಮಾತ್ರ ಅನ್ವಯವಾಗಿತ್ತು. ಆದರೆ, 1975 ರಲ್ಲಿ ಅದನ್ನು ಎಲ್ಲ ಧರ್ಮದವರಿಗೂ ಅನ್ವಯಿಸುವಂತೆ ತಿದ್ದುಪಡಿ ಮಾಡಿರುವುದರಿಂದ ಬಕ್ರೀದ್ ದಿನ ಕುರ್ಬಾನಿ ಕೊಡುವುದಕ್ಕೂ ನಿಷೇಧ ಅನ್ವಯವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.