‘ರಾಹೀಲ್ ವಾಸವಿದ್ದ ಫ್ಲ್ಯಾಟ್ಗೆ ಗುರುವಾರ ಹೋಗಿದ್ದ ಜಯಕುಮಾರ್, ತಿಂಗಳ ಕಂತು ಪಾವತಿಸುವಂತೆ ಪಟ್ಟು ಹಿಡಿದಿದ್ದರು. ಹಣವಿಲ್ಲವೆಂದು ರಾಹೀಲ್ ಹೇಳಿದ್ದ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ಶುರುವಾಗಿತ್ತು. ಇದೇ ಸಂದರ್ಭದಲ್ಲೇ ಆರೋಪಿ, ತರಕಾರಿ ಕತ್ತರಿಸುವ ಚಾಕುವಿನಿಂದ ಜಯಕುಮಾರ್ ಎದೆಯ ಎಡಭಾಗಕ್ಕೆ ಇರಿದಿದ್ದರು. ಮಧ್ಯಪ್ರವೇಶಿಸಿದ್ದ ಸ್ನೇಹಿತರು, ಜಗಳ ಬಿಡಿಸಿದ್ದರು’ ಎಂದೂ ಹೇಳಿದರು.