<p><strong>ಬೆಂಗಳೂರು</strong>: ಬಾಡಿಗೆ ವಿಚಾರವಾಗಿ ಶ್ರೀದೇವಿ (40) ಎನ್ನುವವರ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ಬಾಡಿಗೆದಾರರಾದ ನಜೀರ್ ಹಾಗೂ ಸದ್ದಾಂ ಅವರನ್ನು ಬಂಡೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಬ್ಬರು ಜಾಮಿನು ಮೇಲೆ ಬಿಡುಗಡೆಗೊಂಡಿದ್ದಾರೆ.</p>.<p>‘ಜುಲೈ 6ರಂದು ನಡೆದಿರುವ ಘಟನೆ ಸಂಬಂಧ ಶ್ರೀದೇವಿ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಲಾಗಿತ್ತು. ಅವರಿಬ್ಬರಿಗೂ ಜಾಮೀನು ಸಿಕ್ಕಿದೆ’ ಎಂದು ಪೊಲೀಸರು ಹೇಳಿದರು.</p>.<p>‘ವಿದೇಶದಲ್ಲಿರುವ ಫಯಾಜ್ ಹೆಸರಿನಲ್ಲಿ ಮಂಗಮ್ಮನಪಾಳ್ಯ ಮುನೇಶ್ವರನಗರದಲ್ಲಿ ಕಟ್ಟಡವಿದೆ. ಕಟ್ಟಡದ ನಿರ್ವಹಣೆ ಹಾಗೂ ಬಾಡಿಗೆದಾರರಿಂದ ಬಾಡಿಗೆ ಸಂಗ್ರಹ ಕೆಲಸವನ್ನು ಶ್ರೀದೇವಿ ನೋಡಿಕೊಳ್ಳುತ್ತಿದ್ದಾರೆ. ಅದೇ ಕಟ್ಟಡದ ಮನೆಯಲ್ಲಿ ಆರೋಪಿ ನಜೀರ್ ಹಾಗೂ ಮಗ ಸದ್ದಾಂ ವಾಸವಿದ್ದರು’ ಎಂದು ತಿಳಿಸಿದರು.</p>.<p>ಮೂರು ತಿಂಗಳಿನಿಂದ ನಜೀರ್ ಬಾಡಿಗೆ ನೀಡಿರಲಿಲ್ಲ. ಅದನ್ನು ಕೇಳಲು ಶ್ರೀದೇವಿ ಅವರು ಮನೆಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ನಜೀರ್ ಹಾಗೂ ಸದ್ದಾಂ, ಶ್ರೀದೇವಿ ಮೇಲೆ ಹಲ್ಲೆ ಮಾಡಿದ್ದರು. ಎಡ ಕೈಗೆ ಚಾಕುವಿನಿಂದ ಇರಿದಿದ್ದರು.</p>.<p>‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶ್ರೀದೇವಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.</p>.<p><strong>ನ್ಯಾಯಕ್ಕೆ ಆಗ್ರಹ</strong></p><p>‘ಹಲ್ಲೆ ಆರೋಪಿಗಳು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಿದ್ದಾರೆ. ಸಾಕ್ಷ್ಯ ನಾಶದ ಭಯವಿದೆ. ನಮಗೆ ನ್ಯಾಯ ಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದು ಶ್ರೀದೇವಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಾಡಿಗೆ ವಿಚಾರವಾಗಿ ಶ್ರೀದೇವಿ (40) ಎನ್ನುವವರ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ಬಾಡಿಗೆದಾರರಾದ ನಜೀರ್ ಹಾಗೂ ಸದ್ದಾಂ ಅವರನ್ನು ಬಂಡೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಬ್ಬರು ಜಾಮಿನು ಮೇಲೆ ಬಿಡುಗಡೆಗೊಂಡಿದ್ದಾರೆ.</p>.<p>‘ಜುಲೈ 6ರಂದು ನಡೆದಿರುವ ಘಟನೆ ಸಂಬಂಧ ಶ್ರೀದೇವಿ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಲಾಗಿತ್ತು. ಅವರಿಬ್ಬರಿಗೂ ಜಾಮೀನು ಸಿಕ್ಕಿದೆ’ ಎಂದು ಪೊಲೀಸರು ಹೇಳಿದರು.</p>.<p>‘ವಿದೇಶದಲ್ಲಿರುವ ಫಯಾಜ್ ಹೆಸರಿನಲ್ಲಿ ಮಂಗಮ್ಮನಪಾಳ್ಯ ಮುನೇಶ್ವರನಗರದಲ್ಲಿ ಕಟ್ಟಡವಿದೆ. ಕಟ್ಟಡದ ನಿರ್ವಹಣೆ ಹಾಗೂ ಬಾಡಿಗೆದಾರರಿಂದ ಬಾಡಿಗೆ ಸಂಗ್ರಹ ಕೆಲಸವನ್ನು ಶ್ರೀದೇವಿ ನೋಡಿಕೊಳ್ಳುತ್ತಿದ್ದಾರೆ. ಅದೇ ಕಟ್ಟಡದ ಮನೆಯಲ್ಲಿ ಆರೋಪಿ ನಜೀರ್ ಹಾಗೂ ಮಗ ಸದ್ದಾಂ ವಾಸವಿದ್ದರು’ ಎಂದು ತಿಳಿಸಿದರು.</p>.<p>ಮೂರು ತಿಂಗಳಿನಿಂದ ನಜೀರ್ ಬಾಡಿಗೆ ನೀಡಿರಲಿಲ್ಲ. ಅದನ್ನು ಕೇಳಲು ಶ್ರೀದೇವಿ ಅವರು ಮನೆಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ನಜೀರ್ ಹಾಗೂ ಸದ್ದಾಂ, ಶ್ರೀದೇವಿ ಮೇಲೆ ಹಲ್ಲೆ ಮಾಡಿದ್ದರು. ಎಡ ಕೈಗೆ ಚಾಕುವಿನಿಂದ ಇರಿದಿದ್ದರು.</p>.<p>‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶ್ರೀದೇವಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.</p>.<p><strong>ನ್ಯಾಯಕ್ಕೆ ಆಗ್ರಹ</strong></p><p>‘ಹಲ್ಲೆ ಆರೋಪಿಗಳು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಿದ್ದಾರೆ. ಸಾಕ್ಷ್ಯ ನಾಶದ ಭಯವಿದೆ. ನಮಗೆ ನ್ಯಾಯ ಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದು ಶ್ರೀದೇವಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>