ವರ್ತೂರು, ಕಾಡಗೋಡಿ, ಕೆ.ಆರ್.ಪುರ, ಜೆ.ಬಿ. ನಗರ, ಚಿಕ್ಕಪೇಟೆ, ಸುದ್ದಗುಂಟೆ ಪಾಳ್ಯ, ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡುತ್ತಿದ್ದ ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರದ ನಿವಾಸಿ ದಿಲೀಪ್ ಕುಮಾರ್ ಹಾಗೂ ಚಿನ್ನಪ್ಪನಹಳ್ಳಿ ನಿವಾಸಿ ರಿಯನ್ ಎಂಬುವರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.