ಅದೇ ದಿನ ರಾತ್ರಿ ಶ್ರೀನಿವಾಸ್ ಮಲಗಿದ್ದ ಸ್ಥಳಕ್ಕೆ ಹೋಗಿದ ಟಿ. ಕೃಷ್ಣ, ತಲೆ ಮೇಲೆ ಮೂರು ಬಾರಿ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಮರುದಿನ ಮಾಯಾಕೃಷ್ಣನನ್ನೂ ಜೊತೆಗೆ ಕರೆದುಕೊಂಡ ಟಿ. ಕೃಷ್ಣ, ಮೃತದೇಹವನ್ನು ರಾಂಪುರ ಕೆರೆಗೆ ಹಾಕಲು ಯತ್ನಿಸಿದ್ದಾನೆ. ಆದರೆ, ಶವವನ್ನು ಎತ್ತಲು ಸಾಧ್ಯವಾಗದೆ ಇಬ್ಬರೂ ಆ ಯತ್ನ ಕೈಬಿಟ್ಟಿದ್ದರು.