ಸುರಂಗ ರಸ್ತೆ; ಚರ್ಚೆ ಹಂತದಲ್ಲಿದೆ
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ವಾಹನಗಳ ದಟ್ಟಣೆ, ಅಪಘಾತ ಪ್ರಕರಣಗಳನ್ನು ತಪ್ಪಿಸಲು ಸುರಂಗ ರಸ್ತೆ (ಅಂಡರ್ ಪಾಸ್) ನಿರ್ಮಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಚಿಂತನೆ ನಡೆಸಿದ್ದವು. ಅದಿನ್ನೂ ಚರ್ಚೆ ಹಂತದಲ್ಲೇ ಇದೆ. ಅಪಘಾತ ತಪ್ಪಿಸಲು ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ಆವರಣದ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ. ಮೈಸೂರು ರಸ್ತೆ–ಉಲ್ಲಾಳು ವೃತ್ತ ಸಂಪರ್ಕಿಸುವ ಮುಖ್ಯ ರಸ್ತೆ ಮಾತ್ರ ತೆರೆದಿರುತ್ತದೆ. ಆದರೆ, ಇದರಿಂದ ಕಾಲೇಜು ಅವಧಿಯಲ್ಲಿ ಉಂಟಾಗುವ ವಾಹನ ದಟ್ಟಣೆ ಸಮಸ್ಯೆ ಬಗೆಹರಿಯುವುದಿಲ್ಲ ಎನ್ನುತ್ತಾರೆ ಸಿಬ್ಬಂದಿ.