ಬೆಂಗಳೂರು: ಇಡ್ಲಿ ಬೇಯಿಸಲು ಬಿಸಿ ನೀರು ಕಾಯಿಸುವ ವೇಳೆ ಬಾಯ್ಲರ್ ಸ್ಪೋಟಗೊಂಡಿದ್ದು, ಮೂವರು ಗಾಯಗೊಂಡಿದ್ದಾರೆ.
'ಈಶ್ವರ್ (19), ರವಿಕುಮಾರ್ (20) ಹಾಗೂ ಕಾರ್ತಿಕ್ (18) ಗಾಯಗೊಂಡವರು. ಮೂವರನ್ನು ನಾಗರಬಾವಿ ಬಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಪೊಲೀಸರು ಹೇಳಿದರು.
'ನಮ್ಮೂರು ತಿಂಡಿ ಹೋಟೆಲ್ನಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ' ಎಂದರು.