<p><strong>ಬೆಂಗಳೂರು:</strong> ‘ಇತ್ತೀಚೆಗೆ ವಿಭಜಿತ ಓದು ಮತ್ತು ವಿಮರ್ಶೆ ಮುನ್ನೆಲೆಗೆ ಬರುತ್ತಿದೆ. ವಿಭಜಕ ಪ್ರವೃತ್ತಿ ನಮ್ಮ ಓದಿನ ಹಾಗೂ ವಿಮರ್ಶೆಯ ಸಾಧ್ಯತೆಗಳನ್ನು ಕುಂಟಿಸುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು. </p>.<p>ಅಂಕಿತ ಪುಸ್ತಕ ಪ್ರಕಾಶನದ ‘ಸಾವಿರದ ಸಂಭ್ರಮ’ 1000ನೇ ಕೃತಿಯಾಗಿ ಜೋಗಿ ಅವರ ‘ದಕ್ಷಿಣಾಯನ’ ಕಾದಂಬರಿ ಜನಾರ್ಪಣೆ ಹಾಗೂ 30ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. </p>.<p>‘ಬಂಡಾಯ ಹಾಗೂ ದಲಿತರ ಕುರಿತು ಮಾತನಾಡುತ್ತಾರೆ ಎಂಬ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಪುಸ್ತಕ ಓದುವುದನ್ನು ನಿರಾಕರಿಸಬಾರದು. ಮೊದಲು ಆ ಪುಸ್ತಕಗಳನ್ನು ಓದಬೇಕು. ಅದನ್ನು ಒಪ್ಪಬೇಕೊ ಅಥವಾ ಬಿಡಬೇಕೊ ಎಂಬುದನ್ನು ನಂತರ ನಿರ್ಧರಿಸಬೇಕು. ಅದನ್ನು ಬಿಟ್ಟು ವಿಭಜಿತ ಓದುಗರು ಹಾಗೂ ವಿಮರ್ಶಕರು ಆಗಬಾರದು’ ಎಂದು ಹೇಳಿದರು.</p>.<p>‘ವಿಭಜಿತ ಓದು ಮತ್ತು ವಿಮರ್ಶೆ ಚರಿತ್ರೆಯ ಕೊಂಡಿಗಳನ್ನು ಕಳಚುತ್ತಿದೆ. ಓದು ವಕ್ಕಲಾತ್ತು ಅಲ್ಲ. ವಿಮರ್ಶಕರು ವಕೀಲರಲ್ಲ, ಸಾಹಿತಿಗಳು ಕಕ್ಷಿದಾರರಲ್ಲ. ಇಂತಹ ಸಂದರ್ಭದಲ್ಲಿ ಮಾನವೀಯ, ಆರೋಗ್ಯಕರವಾದ ಸಂವಾದ ನಡೆಸಬೇಕು’ ಎಂದರು. </p>.<p>‘ನಾನು ದಲಿತ, ಬಂಡಾಯದ ಕುರಿತು ಮಾತನಾಡುವುದಕ್ಕೆ ಪ್ರಾರಂಭಿಸಿದ ಬಳಿಕ ನನ್ನ ಪುಸ್ತಕಗಳನ್ನು ನೋಡುವ ದೃಷ್ಟಿಕೋನವೇ ಬದಲಾಯಿತು’ ಎಂದು ಹೇಳಿದರು. </p>.<p>ದಕ್ಷಿಣಾಯನ ಕಾದಂಬರಿ ಜನಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಜಯಂತ್ ಕಾಯ್ಕಿಣಿ, ‘ಪುಸ್ತಕಗಳನ್ನು ಕೊಂಡುಕೊಳ್ಳುವಾಗ ಹಲವರು ಯೋಚನೆ ಮಾಡ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ಪುಸ್ತಕ ಎನ್ನವುದು ಜೀವನದುದ್ದಕ್ಕೂ ನಮ್ಮ ಜೊತೆ ಇರುವಂತಹ ಒಂದು ಆಸ್ತಿ. ಪುಸ್ತಕದ ಅನುಭವ ನಮ್ಮ ಜೊತೆ ಶಾಶ್ವತವಾಗಿ ಇರುತ್ತದೆ’ ಎಂದರು. </p>.<p>ಲೇಖಕರಾದ ಹರೀಶ್ ಕೇರ, ಜೋಗಿ, ಪ್ರಕಾಶ್ ಕಂಬತ್ತಹಳ್ಳಿ, ಪ್ರಭಾ ಕಂಬತ್ತಹಳ್ಳಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಇತ್ತೀಚೆಗೆ ವಿಭಜಿತ ಓದು ಮತ್ತು ವಿಮರ್ಶೆ ಮುನ್ನೆಲೆಗೆ ಬರುತ್ತಿದೆ. ವಿಭಜಕ ಪ್ರವೃತ್ತಿ ನಮ್ಮ ಓದಿನ ಹಾಗೂ ವಿಮರ್ಶೆಯ ಸಾಧ್ಯತೆಗಳನ್ನು ಕುಂಟಿಸುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು. </p>.<p>ಅಂಕಿತ ಪುಸ್ತಕ ಪ್ರಕಾಶನದ ‘ಸಾವಿರದ ಸಂಭ್ರಮ’ 1000ನೇ ಕೃತಿಯಾಗಿ ಜೋಗಿ ಅವರ ‘ದಕ್ಷಿಣಾಯನ’ ಕಾದಂಬರಿ ಜನಾರ್ಪಣೆ ಹಾಗೂ 30ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. </p>.<p>‘ಬಂಡಾಯ ಹಾಗೂ ದಲಿತರ ಕುರಿತು ಮಾತನಾಡುತ್ತಾರೆ ಎಂಬ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಪುಸ್ತಕ ಓದುವುದನ್ನು ನಿರಾಕರಿಸಬಾರದು. ಮೊದಲು ಆ ಪುಸ್ತಕಗಳನ್ನು ಓದಬೇಕು. ಅದನ್ನು ಒಪ್ಪಬೇಕೊ ಅಥವಾ ಬಿಡಬೇಕೊ ಎಂಬುದನ್ನು ನಂತರ ನಿರ್ಧರಿಸಬೇಕು. ಅದನ್ನು ಬಿಟ್ಟು ವಿಭಜಿತ ಓದುಗರು ಹಾಗೂ ವಿಮರ್ಶಕರು ಆಗಬಾರದು’ ಎಂದು ಹೇಳಿದರು.</p>.<p>‘ವಿಭಜಿತ ಓದು ಮತ್ತು ವಿಮರ್ಶೆ ಚರಿತ್ರೆಯ ಕೊಂಡಿಗಳನ್ನು ಕಳಚುತ್ತಿದೆ. ಓದು ವಕ್ಕಲಾತ್ತು ಅಲ್ಲ. ವಿಮರ್ಶಕರು ವಕೀಲರಲ್ಲ, ಸಾಹಿತಿಗಳು ಕಕ್ಷಿದಾರರಲ್ಲ. ಇಂತಹ ಸಂದರ್ಭದಲ್ಲಿ ಮಾನವೀಯ, ಆರೋಗ್ಯಕರವಾದ ಸಂವಾದ ನಡೆಸಬೇಕು’ ಎಂದರು. </p>.<p>‘ನಾನು ದಲಿತ, ಬಂಡಾಯದ ಕುರಿತು ಮಾತನಾಡುವುದಕ್ಕೆ ಪ್ರಾರಂಭಿಸಿದ ಬಳಿಕ ನನ್ನ ಪುಸ್ತಕಗಳನ್ನು ನೋಡುವ ದೃಷ್ಟಿಕೋನವೇ ಬದಲಾಯಿತು’ ಎಂದು ಹೇಳಿದರು. </p>.<p>ದಕ್ಷಿಣಾಯನ ಕಾದಂಬರಿ ಜನಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಜಯಂತ್ ಕಾಯ್ಕಿಣಿ, ‘ಪುಸ್ತಕಗಳನ್ನು ಕೊಂಡುಕೊಳ್ಳುವಾಗ ಹಲವರು ಯೋಚನೆ ಮಾಡ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ಪುಸ್ತಕ ಎನ್ನವುದು ಜೀವನದುದ್ದಕ್ಕೂ ನಮ್ಮ ಜೊತೆ ಇರುವಂತಹ ಒಂದು ಆಸ್ತಿ. ಪುಸ್ತಕದ ಅನುಭವ ನಮ್ಮ ಜೊತೆ ಶಾಶ್ವತವಾಗಿ ಇರುತ್ತದೆ’ ಎಂದರು. </p>.<p>ಲೇಖಕರಾದ ಹರೀಶ್ ಕೇರ, ಜೋಗಿ, ಪ್ರಕಾಶ್ ಕಂಬತ್ತಹಳ್ಳಿ, ಪ್ರಭಾ ಕಂಬತ್ತಹಳ್ಳಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>