<p><strong>ಕೆ.ಆರ್.ಪುರ:</strong> ಬಸವಣ್ಣನವರು ಸರ್ವಧರ್ಮ ಜಾತಿ ಜನಾಂಗಗಳನ್ನು ಒಂದುಗೂಡಿಸಿ ಮಹಾಮಾನವತಾದಿಯಾಗಿದ್ದರು ಎಂದು ಕರ್ನಾಟಕ ದಲಿತ ಕ್ರಿಯಾ ವೇದಿಕೆ ರಾಜ್ಯಾಧ್ಯಕ್ಷ ಕಾಡುಗೋಡಿ ಸೊಣ್ಣಪ್ಪ ಹೇಳಿದರು.</p>.<p>ಸಮೀಪದ ಕಾಡುಗೋಡಿಯ ಬಾಪೂಜಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಪ್ರಯುಕ್ತ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.</p>.<p>ಬಸವಣ್ಣನವರು ಚಳವಳಿಗಳ ಮೂಲಕ ಮಾನವ ಕುಲವೊಂದೆ ಎಂಬ ಸಂದೇಶ ಸಾರಿದರು. ಸರ್ವ ಜನಾಂಗಗಳನ್ನು ಒಂದುಗೂಡಿಸುವ ಕೆಲಸ ಮಾಡಿದ್ದರು. ಜಗತ್ತಿನಲ್ಲಿ ಜಾತಿ ಬೇಧ ಇರಬಾರದು ಸರ್ವರು ಒಂದಾಗಿ ಬಾಳಬೇಕು ಎಂದು ಕನಸು ಕಂಡಿದ್ದರು ಎಂದರು.</p>.<p>ಕಾರ್ಯಕ್ರಮದಲ್ಲಿ ನರಸಿಂಹ, ಬೆಳತ್ತೂರು ವೆಂಕಟೇಶ್, ಡಾ.ಕೃಷ್ಣಮೂರ್ತಿ ಮಾದಿಗ, ಕುಮಾರ್, ಮುನಿಯಪ್ಪ, ರಮೇಶ್, ಮೂರ್ತಿ, ನಟರಾಜ್, ಫಾತಿಮಾ, ರಾಣಿ, ಉದಯಕುಮಾರ್, ಪ್ರಕಾಶ್, ಮುನಿಂದ್ರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ಬಸವಣ್ಣನವರು ಸರ್ವಧರ್ಮ ಜಾತಿ ಜನಾಂಗಗಳನ್ನು ಒಂದುಗೂಡಿಸಿ ಮಹಾಮಾನವತಾದಿಯಾಗಿದ್ದರು ಎಂದು ಕರ್ನಾಟಕ ದಲಿತ ಕ್ರಿಯಾ ವೇದಿಕೆ ರಾಜ್ಯಾಧ್ಯಕ್ಷ ಕಾಡುಗೋಡಿ ಸೊಣ್ಣಪ್ಪ ಹೇಳಿದರು.</p>.<p>ಸಮೀಪದ ಕಾಡುಗೋಡಿಯ ಬಾಪೂಜಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಪ್ರಯುಕ್ತ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.</p>.<p>ಬಸವಣ್ಣನವರು ಚಳವಳಿಗಳ ಮೂಲಕ ಮಾನವ ಕುಲವೊಂದೆ ಎಂಬ ಸಂದೇಶ ಸಾರಿದರು. ಸರ್ವ ಜನಾಂಗಗಳನ್ನು ಒಂದುಗೂಡಿಸುವ ಕೆಲಸ ಮಾಡಿದ್ದರು. ಜಗತ್ತಿನಲ್ಲಿ ಜಾತಿ ಬೇಧ ಇರಬಾರದು ಸರ್ವರು ಒಂದಾಗಿ ಬಾಳಬೇಕು ಎಂದು ಕನಸು ಕಂಡಿದ್ದರು ಎಂದರು.</p>.<p>ಕಾರ್ಯಕ್ರಮದಲ್ಲಿ ನರಸಿಂಹ, ಬೆಳತ್ತೂರು ವೆಂಕಟೇಶ್, ಡಾ.ಕೃಷ್ಣಮೂರ್ತಿ ಮಾದಿಗ, ಕುಮಾರ್, ಮುನಿಯಪ್ಪ, ರಮೇಶ್, ಮೂರ್ತಿ, ನಟರಾಜ್, ಫಾತಿಮಾ, ರಾಣಿ, ಉದಯಕುಮಾರ್, ಪ್ರಕಾಶ್, ಮುನಿಂದ್ರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>