ನಗರದಲ್ಲಿ ಒಟ್ಟು 12 ಕಡೆ ಮೂಲಸೌಕರ್ಯ ಅಭಿವೃದ್ಧಿಗೆ ರಕ್ಷಣಾ ಇಲಾಖೆ ಅನುಮತಿ ಅಗತ್ಯವಿದೆ. ರಕ್ಷಣಾ ಇಲಾಖೆ ಜಾಗ ಬಳಸಿಕೊಂಡು ಅವರಿಗೆ ಬೇರೆ ಕಡೆ ಅಷ್ಟೇ ಮೌಲ್ಯದ ಬೇರೆ ಜಾಗ ನೀಡುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ರಕ್ಷಣಾ ಇಲಾಖೆ ಪ್ರಮುಖ ಅಧಿಕಾರಿಗಳ ಜೊತೆ ಮಾತುಕತೆ ನಡೆದಿತ್ತು. ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಸಚಿವರಾಗಿದ್ದ ವೇಳೆ ಈ ಬಗ್ಗೆ ಅಂತಿಮ ಒಪ್ಪಂದಕ್ಕೆ ಬರಲಾಗಿತ್ತು. ಈ ಯೋಜನೆಗಳಿಗೆ ಅಗತ್ಯ ಇದ್ದ 55,000 ಚದರ ಮೀಟರ್ ಜಾಗವನ್ನು ರಕ್ಷಣಾ ಸಚಿವಾಲಯ ರಾಜ್ಯ ಸರ್ಕಾರಕ್ಕೆ 2019ರ ಮಾರ್ಚ್ 6ರಂದು ಹಸ್ತಾಂತರಿಸಿತ್ತು. ಈ ಯೋಜನೆಗಳಲ್ಲಿ ₹10 ಕೋಟಿ ವೆಚ್ಚದ ಬೈಯಪ್ಪನಹಳ್ಳಿ ಮೇಲ್ಸೇತುವೆ ಕಾಮಗಾರಿಯೂ ಒಂದು.