‘ಈ ಜಾಗವನ್ನು ಬಯೋಮೀಥೇನ್ ಘಟಕ ಸ್ಥಾಪನೆಗಾಗಿ ಕಾಯ್ದಿರಿಸಲಾಗಿತ್ತು. ಇಲ್ಲಿ ಯಾರೋ ಕಿಡಿಗೇಡಿಗಳು ಅನಧಿಕೃತವಾಗಿ ಬಡಾವಣೆ ನಿರ್ಮಿಸಲು ಮುಂದಾಗಿದ್ದರು. ತಾತ್ಕಾಲಿಕ ಕಟ್ಟಡವನ್ನೂ ನಿರ್ಮಿಸಿ ಆವರಣ ಗೋಡೆಯನ್ನೂ ಕಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ನಾವು ಆ ಕಟ್ಟಡ ಹಾಗೂ ಗೋಡೆಯನ್ನು ನೆಲಸಮ ಮಾಡಿದ್ದೇವೆ. ಜಾಗಕ್ಕೆ ಬೇಲಿ ಹಾಕಿ ಸ್ವಾಧೀನಕ್ಕೆ ಪಡೆದಿದ್ದೇವೆ. ಒತ್ತುವರಿದಾರರ ವಿರುದ್ಧ ಎಫ್ಐಆರ್ ದಾಖಲಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಬಿಬಿಎಂಪಿಯ ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್ ಖಾನ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.