ಹೊಸಕೋಟೆ: ಪಟ್ಟಣದ ದೊಡ್ಡ ಗಟ್ಟಿಗನಬ್ಬೆ ರಸ್ತೆಯಲ್ಲಿರುವ ಅನಾಥಾಶ್ರಮದ ಭದ್ರತಾ ಸಿಬ್ಬಂದಿ ನೇಪಾಳ ಮೂಲದ ಅನಿಲ್ (21)ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಶ್ರಮದಲ್ಲಿದ್ದ ಯುವತಿಯನ್ನು ಅನಿಲ್ ಪ್ರೀತಿಸಿದ್ದರು. ಈ ವಿಷಯ ಆಶ್ರಮದ ಮುಖ್ಯಸ್ಥರಿಗೆ ಗೊತ್ತಾಗಿ ಅವರು ಇದಕ್ಕೆ ಆಕ್ಷೇಪಿಸಿದ್ದರು. ರಜೆಯ ಮೇಲೆ ಹೋಗಿದ್ದ ಅನಿಲ್ ಶುಕ್ರವಾರ ರಾತ್ರಿ ಆಶ್ರಮಕ್ಕೆ ಬಂದು ಪ್ರೀತಿಸಿದ ಯುವತಿಯನ್ನು ಕರೆದುಕೊಂಡು ಹೋಗಲು ಮುಂದಾಗಿದ್ದರು.
ಆಗ ಕೋಪಗೊಂಡ ಆಶ್ರಮದ ಮುಖ್ಯಸ್ಥರು ಅನಿಲ್ ಮೇಲೆ ಹಲ್ಲೆ ಮಾಡಿದರು. ಇದರಿಂದ ನೊಂದ ಅವರು ಆಶ್ರಮದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.